ಬೆಳಗಾವಿ: ಮುಂಗಾರು ಹಂಗಾಮಿಗೆ 2023&24ನೇ ಸಾಲಿಗೆ ತಾಲೂಕಿನ ರೈತರಿಗೆ ಕರ್ನಾಟಕ ರೈತ ಸುರಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾಲೂಕಿನ ಕಾಕತಿ, ಉಚಗಾಂವ ಮತ್ತು ಬೆಳಗಾವಿ ಹೋಬಳಿಗಳಿಗೆ ಆಲೂಗಡ್ಡೆ ಮಳೆಯಾಶ್ರಿತ ಮತ್ತು ಕೇವಲ ಕಾಕತಿ ಹೋಬಳಿಗೆ ಟೊಮ್ಯಾಟೊ ಬೆಳೆಗೆ ವಿಮೆ ಅಧಿಸೂಚನೆಯಾಗಿದೆ.
ಆಲೂಗಡ್ಡೆ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಬೆಳೆಗೆ 1,445 ರೂ. ಟೊಮ್ಯಾಟೊ ಬೆಳೆಗೆ 4,457 ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳಗಾವಿ ತಾಲೂಕಿಗೆ ಮಾವು ಬೆಳೆ ಅಧಿಸೂಚನೆಗೊಂಡಿದೆ. ಮಾವು ಬೆಳೆಗೆ ಪ್ರತಿ ಹೆಕ್ಟೇರ್ಗೆ 4,000 ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಜು.31ರೊಳಗೆ ವಿಮೆ ಕಂತು ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು. ಮಾಹಿತಿಗೆ ಬೆಳಗಾವಿ ತಾಲೂಕಿನ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.