ಬಣಕಲ್: ಕಾಫಿ ಬೆಳೆಗಾರರ ವಿದ್ಯುತ್ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಬಾಕಿಯ ಅಸಲನ್ನು ಪಾವತಿಸಿಕೊಂಡು, ಬಾಕಿಗೆ ವಿಧಿಸಿರುವ ಬಡ್ಡಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕೆಜಿಎಫ್ (ಕರ್ನಾಟಕ ಬೆಳೆಗಾರರ ಒಕ್ಕೂಟ) ಪದಾಧಿಕಾರಿಗಳು ಬಣಕಲ್ನಲ್ಲಿ ಇಂಧನ ಸಚಿವ ವಿ.ಸುನೀಲ್ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಕಷ್ಟದಲ್ಲಿರುವ ಬೆಳೆಗಾರರು ವಿದ್ಯುತ್ ಪಂಪ್ಸೆಟ್ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ವಿದ್ಯುತ್ ಶುಲ್ಕ ಮತ್ತು ಅದಕ್ಕೆ ವಿಧಿಸುವ ಬಡ್ಡಿಯ ಮೊತ್ತ ಅಧಿಕವಾಗಿದೆ. ಬಡ್ಡಿಯನ್ನು ಮನ್ನಾ ಮಾಡಬೇಕು. ಬೇರೆ ಕೃಷಿಕರಿಗೆ ನೀಡಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಕಾಫಿಬೆಳೆಗಾರರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಸಚಿವ ಸುನೀಲ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.