More

    ವಿದ್ಯುತ್ ತಂತಿ ತಗುಲಿ ಕುಸ್ತಿಪಟು ಸಾವು

    ಚಿತ್ತಾಪುರ: ಬಂಡಿಯಲ್ಲಿ ಬರುವಾಗ ವಿದ್ಯುತ್ ತಂತಿ ತಗುಲಿ ಕುಸ್ತಿ ಪಟು ಹಾಗೂ ಎತ್ತೊಂದು ಮೃತಪಟ್ಟ ಧಾರುಣ ಘಟನೆ ಕರದಾಳ ಗ್ರಾಮದಲ್ಲಿ ಸೋಮವಾರ ಜರುಗಿದೆ.

    ಕರದಾಳದ ಗ್ರಾಮೀಣ ಕುಸ್ತಿಪಟು ಬಸವರಾಜ ಎಗಲೇರಿ (22) ಮೃತ ಯುವಕ. ಬಸವರಾಜ ಹಾಗೂ ದೇವರಾಜ ಸಹೋದರರು ಬೆಳೆಗೆ ಔಷಧಿ ಸಿಂಪಡಿಸುವುದಕ್ಕಾಗಿ ಜಮೀನಿಗೆ ಹೋಗಿದ್ದರು. ಕೃಷಿ ಚಟುವಟಿಕೆ ಮುಗಿಸಿ ಸಂಜೆ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಸ್ ಆಗುವಾಗ ಮಾರ್ಗ ಮಧ್ಯೆದಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಬಸವರಾಜನ ಹಣೆಗೆ ತಗುಲಿದ್ದು, ಬಳಿಕ ಎತ್ತೊಂದರ ಮೇಲೆ ಬಿದ್ದಿದೆ. ಬಸವರಾಜ ಹಾಗೂ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದೆ. ಸಹೋದರ ದೇವರಾಜ ಹಾಗೂ ಇನ್ನೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದೆ.

    ಪಿಎಸ್‌ಐ ಚೇತನ ಪೂಜಾರಿ, ಎಎಸ್‌ಐ ಹಣಮಂತ, ಕಾನ್‌ಸ್ಟೇಬಲ್‌ಗಳಾದ ವೆಂಕಟ್, ತಿಮ್ಮಯ್ಯ, ಅಯ್ಯಣ್ಣ, ಶಿವಯ್ಯ, ಮಕದುಮ್ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts