ಚಿತ್ರದುರ್ಗ:ಜಿಲ್ಲಾ ಆಯುಷ್ ಇಲಾಖೆ ಹಾಗೂ ಜೆಎನ್ಕೋಟೆ ಆಯುಷ್ ಆಯುರ್ವೇದ ಚಿಕಿತ್ಸಾ ಕೇಂದ್ರದಿಂದ ಶನಿವಾರ ಚಿತ್ರದು ರ್ಗ ತಾಲೂಕಿನ ಗೊಲ್ಲನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ ಯೋಗ ತರಬೇತಿ ಏರ್ಪಡಿಸಲಾಗಿತ್ತು. ಮುಖ್ಯಶಿಕ್ಷಕ ಮಹಾಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಆಯುಷ್ ಇಲಾಖೆ ಯೋಗ ತರಬೇತುದಾರ ರವಿ ಕೆ.ಅಂಬೇಕರ್,ದೊಡ್ಡಸಿದ್ದ ವ್ವನಹಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಎಂ.ಆರ್.ಮಂಜುನಾಥ್ ತರಬೇತಿ ನೀಡಿದರು. ಸಹ ಶಿಕ್ಷಕ ಸೋಮ ಶೇಖರ್,ಆಶಾಕಾರ್ಯಕ ರ್ತೆ ಕಾವ್ಯ,ಅಂಗನವಾಡಿ ಶಿಕ್ಷಕಿ ಗಂಗಮ್ಮ ಮತ್ತಿತರರು ಹಾಜರಿದ್ದರು.