More

    ವಾಯುವಿಹಾರಿಗಳ ಬಳಿ ಮಹೇಶ್ ಮತಯಾಚನೆ

    ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎನ್.ಮಹೇಶ್ ಶನಿವಾರ ಬೆಳಗ್ಗೆ ಪಟ್ಟಣದಲ್ಲಿ ವಾಯುವಿಹಾರದಲ್ಲಿ ತೊಡಗಿದ್ದ ಮತದಾರರ ಬಳಿ ಮತಯಾಚನೆ ಮಾಡಿದರು.


    ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಹಾಗೂ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿದ ಶಾಸಕರು, ವಾಯುವಿಹಾರದಲ್ಲಿ ತೊಡಗಿದ್ದ ಮತದಾರ ಜತೆ ಕೆಲಕಾಲ ಚರ್ಚಿಸಿ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಆಯ್ಕೆ ಮಾಡುವ ಮೂಲಕ ಆಶೀರ್ವದಿಸಬೇಕಾಗಿ ಮನವಿ ಮಾಡಿದರು.


    ಈ ವೇಳೆ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಪಡಿಸಿದ್ದ ಕರಪತ್ರಗಳನ್ನು ವಿತರಿಸಲಾಯಿತು. ಸುದ್ದಿಗಾರರೊಂದಿಗೆ ಶಾಸಕ ಎನ್.ಮಹೇಶ್ ಮಾತನಾಡಿ, ಇಂದಿನಿಂದ ಅಧಿಕೃತವಾಗಿ ಮನೆ ಮನೆ ಪ್ರಚಾರ ಪ್ರಾರಂಭಿಸಿದ್ದೇನೆ. ಅಂತೆಯೇ, ಎಂಜಿಎಸ್‌ವಿ ಹಾಗೂ ಶ್ರೀ ಮಹದೇಶ್ವರ ಜೂನಿಯರ್ ಕಾಲೇಜು ಮೈದಾನದಲ್ಲಿ ವಾಯುವಿಹಾರಿಗಳ ಬಳಿ ಮತಯಾಚನೆ ಮಾಡಿದ್ದೇನೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರಜ್ಞಾವಂತರು ಹಾಗೂ ಶಿಕ್ಷಿತರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ನನ್ನ ಪರವಾಗಿದ್ದಾರೆ. ಈ ಬಾರಿ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗಾಗಿ ಅವಕಾಶ ನೀಡಬೇಕಾಗಿ ಮನವಿ ಮಾಡುತ್ತಿದ್ದೇನೆ. ನನ್ನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸ ಕರ ಪತ್ರವನ್ನು ನೀಡಿ ಮತಯಾಚನೆ ಮಾಡಿದ್ದೇನೆ. ಕೋವಿಡ್ ಹಾಗೂ ಪ್ರವಾಹ ಸಂದಿಗ್ಧತೆ ನಡುವೆಯೂ ಕೋಟ್ಯಂತರ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ನನಗೆ ವಿಶ್ವಾಸವಿದೆ ಮತದಾರ ಪ್ರಭುಗಳು ಕೈಹಿಡಿಯಲಿದ್ದಾರೆ ಎಂದರು.


    ಯುವಕರ ಜತೆ ಕ್ರಿಕೆಟ್ ಆಡಿದ ಎನ್.ಮಹೇಶ್: ಮತಯಾಚನೆ ವೇಳೆ ಶ್ರೀಮಹದೇಶ್ವರ ಕಾಲೇಜಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವ ಮತದಾರರನ್ನು ಮಾತನಾಡಿಸಿ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಅವರೊಂದಿಗೆ ಕೆಲ ಸಮಯ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದರು.


    ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನಟರಾಜೇಗೌಡ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಕಾರ್ಯದರ್ಶಿ ರವಿಕುಮಾರ್, ನಗರಸಭೆ ಸದಸ್ಯ ಶಂಕನಪುರ ಪ್ರಕಾಶ್, ಚಿಂತು ಪರಮೇಶ್, ಮಧುಚಂದ್ರ, ರಾಮಕೃಷ್ಣ, ಮುಖಂಡ ನಿರಂಜನ್, ಜಾಕಿ ಸುರೇಶ್, ಅಗಸ್ಟಿನ್, ಗೋಪಿ, ರಮೇಶ್, ವಿಜಯ್ ಕುಮಾರ್, ಶ್ರೀಧರ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts