More

    ಬಿಜೆಪಿ ಹೈಕಮಾಂಡ್ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧೆ – ಮಹಾಂತೇಶ ಕವಟಗಿಮಠ


    ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಜಿಲ್ಲೆಯ ಯಾವ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸೂಚಿಸುತ್ತಾರೋ ಆ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಾನೇನು ವರಿಷ್ಠರ ಬಳಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿಲ್ಲ. ಆದರೆ, ಪಕ್ಷ ನನಗೆ ಯಾವ ಜವಾಬ್ದಾರಿ ಕೊಡುತ್ತದೆಯೋ ಅದನ್ನು ವಹಿಸಿಕೊಳ್ಳುತ್ತೇನೆ.

    ಸಮಗ್ರ ಬೆಳಗಾವಿ ಜಿಲ್ಲೆಯ ಸಮುದಾಯಗಳ ಸ್ಥಿತಿಗತಿ, ರಾಜಕೀಯ ಕ್ಷೇತ್ರವನ್ನು ಬಲ್ಲವನಾಗಿದ್ದೇನೆ. ಮುಖ್ಯವಾಗಿ ಕರೊನಾ ಹಾಗೂ ಪ್ರವಾಹದಂತ ಸಂಕಷ್ಟ ಸಂದರ್ಭದಲ್ಲಿ ಜನಸೇವೆಗೆ ಧಾವಿಸಿದ್ದೇನೆ. ಹೀಗಾಗಿ ವಹಿಸುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.

    ನಮ್ಮ ಅಜ್ಜ ಮತ್ತು ತಂದೆ ಅವರ ಸಹಕಾರಿ ಕ್ಷೇತ್ರದ ಪ್ರಬುದ್ಧತೆ ನನಗೆ ಬಳುವಳಿಯಾಗಿ ಬಂದಿದೆ. ಹೀಗಾಗಿ ನಮ್ಮ ಸಹಕಾರಿ ಬ್ಯಾಂಕ್‌ನ ಗ್ರಾಹಕರ ಹಣಕ್ಕೆ ಭದ್ರತೆ ಕಲ್ಪಿಸಿ ಪಾರದರ್ಶಕವಾಗಿ ಬ್ಯಾಂಕ್ ಮುನ್ನಡೆಸುತ್ತೇವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts