More

    ಲಾರಿ ಹರಿದು ಯುವಕ ಸಾವು

    ಹಾಸನ: ಅರಕಲಗೂಡು ತಾಲೂಕಿನ ಮಲ್ಲಿರಾಜಪಟ್ಟಣದಲ್ಲಿ ಲಾರಿ ಹರಿದು ಯುವಕ ಮೃತಪಟ್ಟಿದ್ದಾನೆ.
    ಛತ್ತೀಸ್‌ಗಢ ಮೂಲದ ನಂದನ್ ಲಾಲ್ ಅವರ ಮಗ ವಿಜಯ್ (21) ಮೃತರು. ಕೆಲಸಕ್ಕಾಗಿ ಛಛತ್ತೀಸ್‌ಗಢದಿಂದ ರಾಜ್ಯಕ್ಕೆ ಬಂದಿದ್ದ ವಿಜಯ್ ಎರಡು ತಿಂಗಳ ಹಿಂದೆ ತಾಲೂಕಿನ ಮಲ್ಲಿರಾಜಪಟ್ಟಣದ ಸೋಮಶೇಖರ್ ಎಂಬುವವರ ಕೊಳವೆಬಾವಿ ಕೊರೆಯುವ ಲಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಗುರುವಾರ ತಾಲೂಕಿನ ವಡ್ಡರಹಳ್ಳಿಯಲ್ಲಿ ಕೊಳವೆಬಾವಿ ಕೊರೆದು ರಾತ್ರಿ ಮಲ್ಲಿರಾಜಪಟ್ಟಣಕ್ಕೆ ವಾಪಸಾಗಿದ್ದಾರೆ. ರಾತ್ರಿ 10.30 ಸಮಯದಲ್ಲಿ ಲಾರಿಯ ಟ್ಯಾಂಕ್‌ಗೆ ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ರಿವರ್ಸ್ ತೆಗೆಯುವಾಗ ಹಿಂಬದಿ ನಿಂತಿದ್ದ ವಿಜಯ್‌ನನ್ನು ನೋಡದೇ ಆತನ ಮೇಲೆ ಲಾರಿ ಹರಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ವಿಜಯ್‌ನನ್ನು ತಕ್ಷಣವೇ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತ ಯುವಕನ ತಂದೆ ನಂದನ್ ಲಾಲ್ ಕೊಣನೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts