More

    ರೈಲ್ವೆ ಸೇತುವೆ ಕೆಳಗೆ ಸಂಚಾರ ಸಂಕಷ್ಟ

    ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಸಾಯಿನಗರ ಗೋಪನಕೊಪ್ಪ ರಸ್ತೆಯಲ್ಲಿನ ರೈಲ್ವೆ ಸೇತುವೆ ಕೆಳಗೆ ಗುಂಡಿಗಳು ಬಿದ್ದಿದ್ದು, ನಿತ್ಯ ವಾಹನ ಸಂಚಾರ ಸಂಕಟಮಯವಾಗಿ ಪರಿಣಮಿಸಿದೆ.

    ಸೇತುವೆ ಕೆಳಭಾಗದಲ್ಲಿ ಎರಡು ಅಡಿಯಷ್ಟು ದೊಡ್ಡ ಹೊಂಡ ಬಿದ್ದಿದ್ದರಿಂದ ಸಣ್ಣ ಕಾರು, ಇತರೆ ವಾಹನಗಳು, ಬೈಕ್​ಗಳು ಮಗುಚಿ ಬೀಳುವ ಅಪಾಯ ಎದುರಾಗಿದೆ.

    ಮಳೆಗಾಲದಲ್ಲಿ ನೀರು ನಿಲ್ಲುತ್ತಿರುವುದರಿಂದ ಗುಂಡಿಯ ಆಳ ಗೊತ್ತಾಗದೇ ಅನೇಕ ವಾಹನಗಳು ಸಿಲುಕಿಕೊಂಡು ಸಮಸ್ಯೆ ಎದುರಿಸಿವೆ. ಸೇತುವೆ ಕೆಳಗಿನ ರಸ್ತೆ ಸುಧಾರಣೆ ಮಾಡುವಂತೆ ರೈಲ್ವೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಿರಿಯ ನಾಗರಿಕರಾದ ಜೀವನ ವಸ್ತ್ರದ ದೂರಿದ್ದಾರೆ.

    ಸೇತುವೆ ಕೆಳಗೆ ಸರಾಗವಾಗಿ ನೀರು ಹರಿಯಲು ಪೈಪ್​ಲೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದು ಹೂಳು ತುಂಬಿಕೊಂಡಿದೆ. ಸರಿಯಾಗಿ ಹರಿದು ಹೋಗದೇ ಸಮಸ್ಯೆಯಾಗುತ್ತಿದೆ. ಅಲ್ಲದೆ, ರಸ್ತೆ ಹಾಳಾಗಿದ್ದು, ಶೀಘ್ರ ಸರಿಪಡಿಸಬೇಕು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts