More

    ರಕ್ತದಾನದಿಂದ ಅಮ್ಯೂಲ ಪ್ರಾಣ ರಕ್ಷಣೆ

    ಚಿತ್ರದುರ್ಗ: ರಕ್ತದಾನದಿಂದ ಜೀವ ರಕ್ಷಣೆ ಸಾಧ್ಯವಾಗಲಿದೆ ಎಂದು ಡಾ.ಎಸ್.ಪಿ.ರವೀಂದ್ರ ಹೇಳಿದರು. ರಾಜ್ಯಮಾದಿಗ ಸಮಾಜದ ಜಿಲ್ಲಾಘಟಕದಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ರಕ್ತದಾನ ಮ ಹಾದಾನ. ರಕ್ತಕ್ಕೆ ಪರ್ಯಾಯ ಬೇರೊಂದು ಇಲ್ಲ.
    ಅಪಘಾತ,ಹೆರಿಗೆ,ಆಪರೇಷನ್ ಮತ್ತಿತರ ಸಂದರ್ಭ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆಯಿರುತ್ತದೆ. ಹಾಗಾಗಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಅಮೂಲ್ಯವಾದ ಪ್ರಾಣವನ್ನು ರಕ್ತದಾನದ ಮೂಲಕ ಕಾಪಾಡುವಂತೆ ನಾಗರಿಕರಿಗೆ ಮನವಿ ಮಾಡಿದರು.
    ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ರಕ್ತದಾನ ಮಾಡಿದರು. ಆಯಕ್ತ ಸೋಮಶೇಖರ್,ರಾಜ್ಯಭ್ರಷ್ಟಾಚಾರ ವಿರೋಧಿ ಆಂದೋಲನ ಅಧ್ಯಕ್ಷ ಹ ನುಮಂತಪ್ಪದುರ್ಗ,ರಾಜ್ಯಮಾದಿಗ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ದೇವರಾಜ್,ಅಧ್ಯಕ್ಷ ಟಿ.ಶೇಖರಪ್ಪ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಒ. ಸೋಮಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts