More

    ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ

    ಔರಾದ್: ಯುವಕರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಅಳವಡಿಸಿಕೊಳ್ಳುವುದರ ಜತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಗನ್ನಾಥರಾವ ಹವಶೆಟ್ಟೆ ಫೌಂಡೇಷನ್ ಅಧ್ಯಕ್ಷ ಗುರುನಾಥ ಹವಶೆಟ್ಟೆ ಸಲಹೆ ನೀಡಿದರು.

    ನಂದಿ ನಾಗೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ನಿಮಿತ್ತ ಫೌಂಡೇಷನ್ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೌಂಡೇಷನ್ ಮೂಲಕ ಪ್ರತಿವರ್ಷ ಅಕ ಅಂಕ ಪಡೆದ ಮಕ್ಕಳಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಗುತ್ತಿದೆ. ಇದರೊಂದಿಗೆ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಫೌಂಡೇಷನ್ ಕಾರ್ಯದರ್ಶಿ ಪ್ರಭು ಮೂಲಗೆ, ಗ್ರಾಪಂ ಸದಸ್ಯರಾದ ವಿಜಯಲಕ್ಷ್ಮೀ ರಮೇಶ, ದ್ರೋಪತಿ ಭಾವಿಕಟ್ಟಿ, ಪ್ರಮುಖರಾದ ಚನ್ನಬಸಪ್ಪ ಬಾಗಲೆ, ಬಸಪ್ಪ ಮೂಲಗೆ, ಗಂಗಶೆಟ್ಟಿ ಹವಶೆಟ್ಟೆ, ಅಶೋಕ ಇರಪಳ್ಳೆ, ರಾಮಶೆಟ್ಟಿ ಕೊಡಗೆ, ಗಣಪತಿ ತುಳಜಾಪುರೆ, ಓಂಕಾರ ಹವಶೆಟ್ಟೆ, ಚಂದ್ರಪ್ಪ ವಗದಾಳೆ, ಸಂತೋಷ ಚಿಲ್ಲಾ, ವಿಜಯಕುಮಾರ ಹವಶೆಟ್ಟೆ, ಉಮೇಶ ವಂಗದಾಳೆ, ಸೂರ್ಯಕಾಂತ ವಕೀಲ ಇತರರಿದ್ದರು. ಅಕ ಅಂಕ ಪಡೆದ ಮೂವರಿಗೆ ತಲಾ 2500 ರೂ. ನಗದು ನೀಡಿ ಸತ್ಕರಿಸುವುದರ ಜತೆಗೆ 35 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts