More

    ಯುಪಿ- ಬಿಹಾರಕ್ಕೆ ತೆರಳಿದ 134 ಕಾರ್ವಿುಕರು

    ಹಳಿಯಾಳ: ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದ ಕಾರ್ವಿುಕರು ಬುಧವಾರ ತಮ್ಮ ಸ್ವಕ್ಷೇತ್ರ ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಕ್ಕೆ ಪ್ರಯಾಣ ಬೆಳೆಸಿದರು.

    ಶಾಸಕ ಆರ್.ವಿ. ದೇಶಪಾಂಡೆ ಅವರು ವಿಆರ್​ಡಿ ಟ್ರಸ್ಟ್ ಮೂಲಕ, ವಲಸೆ ಕಾರ್ವಿುಕರಿಗೆ ಹುಬ್ಬಳ್ಳಿಗೆ ತೆರಳಲು ಐದು ಬಸ್ ಹಾಗೂ ಪ್ರಯಾಣದ ಸಮಯದಲ್ಲಿ ಬೇಕಾಗುವ ಆಹಾರ, ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಿದ್ದರು. ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಕಟ್ಟಡ ನಿರ್ವಣ, ಪ್ಲಂಬಿಂಗ್, ಸಕ್ಕರೆ ಕಾರ್ಖಾನೆ, ಹೋಟೆಲ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಸೇವಾ ಸಿಂಧು ತಂತ್ರಾಂಶದ ಮೂಲಕ ಹಳಿಯಾಳ ಮತ್ತು ದಾಂಡೇಲಿಯಿಂದ ಬಿಹಾರಕ್ಕೆ ಹೋಗುವ 35 ಹಾಗೂ ಉತ್ತರಪ್ರದೇಶಕ್ಕೆ ತೆರಳುವ 134 ಕಾರ್ವಿುಕರು ಹೆಸರು ನೋಂದಾಯಿಸಿದ್ದರು. ಹುಬ್ಬಳ್ಳಿಯಿಂದ ಬುಧವಾರ ಶ್ರಮಿಕ ಎಕ್ಸ್​ಪ್ರೆಸ್​ನಲ್ಲಿ ಇವರು ತೆರಳಲು ಹೆಸರು ನೋಂದಾಯಿಸಿದ್ದರು.

    ಇಲ್ಲಿಯ ಮಿನಿವಿಧಾನಸೌಧದಲ್ಲಿ ಕಾರ್ವಿುಕರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ವಿಆರ್​ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಕಂದಾಯ ಇಲಾಖೆಯ ಕಾರ್ವಿುಕರ ವಲಸೆ ನಿರ್ವಹಣೆ ವಿಭಾಗಾಧಿಕಾರಿ ಕಿರಣ ಜಕ್ಕಲಿ, ಪರಶುರಾಮ ಶಿಂಧೆ, ರಾಮಕ್ಕ ಕೊರ್ವಿ, ಎಎಸ್​ಐ ಮಹಾಬಳೇಶ್ವರ ಗಡೇರ, ಶಾಸಕರ ಆಪ್ತ ಸಹಾಯಕ ಸೂರಜ ಪತ್ರಿ, ಅವಿನಾಶ ಲೋಣಿ, ಸುಕುಮಾರ ಉಪಾಧ್ಯಾಯ, ಗಣೇಶ ಭಟ್, ವಿಕ್ರಮ ಲೋಖಂಡೆ, ಎಸ್.ಜಿ. ಮಾನಗೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts