More

    ಮೇಗರವಳ್ಳಿಯಲ್ಲಿ ದರೋಡೆ ಯತ್ನ

    ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿಯಲ್ಲಿ ಸೋಮವಾರ ಮಧ್ಯರಾತ್ರಿ ಹೆದ್ದಾರಿಯಲ್ಲಿ ಪೇಟೆ ವ್ಯಾಪ್ತಿಯಲ್ಲೇ ಇರುವ ಮನೆಗೆ ನುಗ್ಗಿದ ಮಾರಕಾಸ್ತ್ರಗಳನ್ನು ಹೊಂದಿದ್ದ 5 ಜನ ಮá-ಸá-ಕá-ಧಾರಿಗಳ ತಂಡ ದರೋಡೆ ಯತ್ನ ನಡೆಸಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ಬಂದೂಕು ತರುತ್ತಿದ್ದಂತೆ ಹೊರಗೆ ಸಿದ್ಧವಾಗಿ ನಿಂತಿದ್ದ ಕಾರು ಹತ್ತಿ ಪರಾರಿಯಾಗಿದ್ದಾರೆ.

    ಮಧ್ಯರಾತ್ರಿ 12.45ಕ್ಕೆ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರು ಗಣೇಶ್ ಹೆಗ್ಡೆ ಎಂಬುವರ ಮುಂಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಬಾಗಿಲು ಮುರಿದ ಶಬ್ಧಕ್ಕೆ ಮನೆಯಿಂದ ಹೊರಗೆ ಬಂದ ಗಣೇಶ್ ಹೆಗ್ಡೆಗೆ ತಲವಾರ್ ಮತ್ತು ಕೈಗೆ ಹಾಕಿಕೊಂಡಿದ್ದ ಕಬ್ಬಿಣದ ಸರಪಳಿಯಿಂದ ಹಲ್ಲೆ ಮಾಡಿದ್ದಾರೆ. ನಂತರ ಗಣೇಶ್ ಹೆಗ್ಡೆ ಅವರ ಪುತ್ರ ರೇವಂತ್ ಮತ್ತು ಸಹೋದರ ಪುರುಷೋತ್ತಮ ಹೆಗ್ಡೆ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ರೇವಂತ್ ತಲೆಗೆ, ಪುರುಷೋತ್ತಮ ಹೆಗ್ಡೆ ಅವರ ಹಣೆ ಮತ್ತು ತುಟಿಗೆ ಏಟು ಬಿದ್ದಿದೆ.

    ಮೂವರ ಮೇಲೆ ಹಲ್ಲೆ ಮಾಡಿದ ನಂತರ ದರೋಡೆಕೋರರು ರೂಮಿನಲ್ಲಿದ್ದ ಅಲ್ಮೇರಾ ತೆರೆಯುವ ಯತ್ನದಲ್ಲಿದ್ದಾಗ ಪುರುಷೋತ್ತಮ ಹೆಗ್ಡೆ ಒಳಗಿದ್ದ ಬಂದೂಕು ತರುತ್ತಿದ್ದಂತೆ ದುಷ್ಕರ್ವಿುಗಳು ಮನೆಯ ಹೊರಗೆ ಸಿದ್ಧವಾಗಿ ನಿಂತಿದ್ದ ಕಾರನ್ನು ಏರಿ ಪರಾರಿಯಾಗಿದ್ದಾರೆ. ಅಲ್ಮೇರಾ ಇದ್ದ ರೂಮಿನಲ್ಲಿ ಆರೋಪಿಗಳು ತಂದಿದ್ದ ಎರಡು ಹೊಸ ಸ್ಕ್ರೂ ಡ್ರೖೆವರ್​ಗಳು ಬಿದ್ದಿವೆ.

    ಮನೆಯಲ್ಲಿ ಒಟ್ಟು 9 ಜನರಿದ್ದು, ದರೋಡೆಕೋರರು ನುಗ್ಗಿರá-ವ ವಿಷಯ ತಿಳಿಯá-ತ್ತಿದ್ದಂತೆ ಕೊಠಡಿಯ ಬಾಗಿಲು ಹಾಕಿಕೊಂಡು ಜೀವ ಭಯದಿಂದ ಕಾಲ ಕಳೆದಿದ್ದಾರೆ. ಸ್ಥಳಕ್ಕೆ ಹೈವೇ ಪ್ಯಾಟ್ರೋಲ್ ತಂಡ ಆಗಮಿಸಿತ್ತು. ಶಿವಮೊಗ್ಗದಿಂದ ಎಎಸ್​ಐ ಸತೀಶ್ ಹಾಗೂ ರಮೇಶ್ ನಾಯ್್ಕ ನೇತೃತ್ವದ ಬೆರಳಚ್ಚು ತಂಡ ತನಿಖೆ ನಡೆಸಿದೆ. ಆಗುಂಬೆ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts