ಕಲಬುರಗಿ: ಉತ್ತರ ಕ್ಷೇತ್ರದ ದುಬೈ ಕಾಲನಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದ ಬಾಲಕರ ಮನೆಗೆ ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ಬಿಜೆಪಿ ಮುಖಂಡ ಚಂದು ಪಾಟೀಲ್ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಚಂದು ಪಾಟೀಲ್ ಫೌಂಡೇಷನ್ನಿAದ ನೆರವಿನ ಚೆಕ್ ವಿತರಿಸಿದರು. ಮೇಯರ್ ವಿಶಾಲ ದರ್ಗಿ, ಉಪ ಮೇಯರ್ ಶಿವಾನಂದ ಪಿಸ್ತಿ ಇತರರಿದ್ದರು. ನಂತರ ಅವಘಡ ಸ್ಥಳಕ್ಕೂ ಭೇಟಿ ನೀಡಿದರು.