More

    ಮುಖಂಡ ಧರೆಪ್ಪ ಠಕ್ಕಣ್ಣವರ ಯುವಜನತೆಗೆ ಸ್ಫೂರ್ತಿ

    ಅಥಣಿ, ಬೆಳಗಾವಿ: ಸಮಾಜ ಸೇವೆ ಮೂಲಕ ಯುವ ಜನತೆಯ ಸ್ಫೂರ್ತಿಯಾಗಿರುವ ಧರೆಪ್ಪ ಠಕ್ಕಣ್ಣವರ ಅವರಿಂದ ಸಮಾಜಕ್ಕೆ ಸತ್ಕಾರ್ಯಗಳು ನೆರವೇರಲಿ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಇಲ್ಲಿನ ಕೃಷ್ಣಾ ರೈತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖಂಡ ಧರೆಪ್ಪ ಠಕ್ಕಣ್ಣವರ ಅವರ 39ನೇ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಧರೆಪ್ಪ ಠಕ್ಕಣ್ಣವರ ಸದಾ ಕ್ರಿಯಾಶೀಲರಾಗಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಗಳು ದೊರೆಯಲಿ ಎಂದು ಹಾರೈಸಿದರು. ಗಚ್ಚಿನಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥ ಭಾವನೆ ಹಾಗೂ ಸಹೃದಯದಿಂದ ಸೇವೆ ಮಾಡುವ ಮನಸ್ಸು ಇರುವ ಧರೆಪ್ಪ ಠಕ್ಕಣ್ಣವರ ಯುವಕರಿಗೆ ಆದರ್ಶರಾಗಿದ್ದಾರೆ ಎಂದರು. ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಯುವಕರ ಪ್ರೀತಿ, ವಿಶ್ವಾಸ, ಸಂಪಾದಿಸಿರುವ ಮುಖಂಡ ಧರೆಪ್ಪ ಹೆಚ್ಚಿನ ಜನಮನ್ನಣೆ ಪಡೆಯಲಿ ಎಂದರು.

    ಕಾಂಗ್ರೆಸ್ ಮುಖಂಡ ಎಸ್.ಕೆ.ಬುಟಾಳಿ ಮಾತನಾಡಿ, ಠಕ್ಕಣ್ಣವರ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೆ, ಅವರನ್ನು ಬೆಂಬಲಿಸುವೆ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಅವರು ನನ್ನನ್ನು ಬೆಂಬಲಿಸುತ್ತಾರೆ ಎಂದರು.

    ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಅಶ್ವಮೇಧ ಕುದುರೆ ಈಗ ರಣರಂಗಕ್ಕೆ ಸಜ್ಜಾಗಿದೆ, ಧರೆಪ್ಪ ಅವರು ಸಂಘಟನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಯಲಿ ಎಂದರು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ವಿವಿಧ ಶಾಲೆಗಳಿಗೆ ಆಹಾರದ ಕಿಟ್ ವಿತರಿಸುವ ಜತೆಗೆ ರಕ್ತದಾನ ಶಿಬಿರ ಜರುಗಿತು.

    ಕಕಮರಿಯ ಅಭಿನವ ಗುರುಲಿಂಗ ಸ್ವಾಮೀಜಿ, ನದಿ ಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ, ಹಲ್ಯಾಳದ ಗುರುಸಿದ್ಧ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ನಂದಗಾಂವದ ಮಹಾದೇವ ಮಹಾರಾಜರು ಮಾತನಾಡಿದರು. ಮುಖಂಡರಾದ ವಿನಯ ನಾವಲಗಟ್ಟಿ, ಸುಶೀಲ ಬೆಳಗಲಿ, ಸತ್ಯಪ್ಪ ಬಾಗೆನ್ನವರ, ರವಿ ಬಡಕಂಬಿ, ನಿಶಾಂತ ದಳವಾಯಿ, ಶಿವು ಮೆಟ್ಯಾಳ, ಬಸವರಾಜ ಠಕ್ಕಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts