More

    ಮಹಿಳೆಯರ ಸಮಗ್ರ ಏಳಿಗೆಯಲ್ಲಿದೆ ದೇಶದ ಭವಿಷ್ಯ

    ಬೆಳಗಾವಿ: ಮಹಿಳೆಯರ ಸ್ಥಿತಿಗತಿ ಸಮರ್ಪಕವಾಗಿಲ್ಲದೆ ಹೋದರೆ ಉತ್ತಮ ಸಮಾಜದ ನಿರೀಕ್ಷೆ ಅಸಾಧ್ಯ. ಮಹಿಳೆಯ ಏಳಿಗೆಯಲ್ಲಿ ದೇಶದ ಭವಿಷ್ಯವಿದೆ ಎಂದು ಗೋಕಾಕ ಜೆಎಸ್‌ಸ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆಶಾಲತಾ ತೇರದಾಳ ಎಂದು ಅಭಿಪ್ರಾಯಪಟ್ಟರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವೇದಗಳ ಕಾಲದಲ್ಲಿ ಮಹಿಳೆಯರ ಸ್ಥಿತಿಗತಿ ಚೆನ್ನಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮಹಿಳೆಯನ್ನು ಕೇಂದ್ರದಿಂದ ಅಂಚಿನೆಡೆಗೆ ತಳ್ಳಲ್ಪಟ್ಟಿತು. ಪ್ರತಿಯೊಬ್ಬ ವ್ಯಕ್ತಿಯು ಜನ್ಮತಃ ಸ್ವತಂತ್ರ. ಆದರೆ, ಮಹಿಳೆಯನ್ನು ಮಾತ್ರ ಅನೇಕ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹುಟ್ಟಿನೊಂದಿಗೆ ತನ್ನ ಆಂತರಿಕ ಮತ್ತು ಭೌತಿಕ ವಿಕಾಸದ ಸಾಧ್ಯತೆ ಪಡೆದುಕೊಂಡೇ ಬಂಧಿರುವ ಅವಳ ಮೇಲೆ ಶಾಸ್ತ್ರ, ಸಂಪ್ರದಾಯ, ಧರ್ಮ ಇನ್ನಿತರ ಅಂಶ ಹೇರುತ್ತಲೇ ಇದ್ದಾರೆ. ಸಮಸಮಾಜದ ವಿರೋಧದ ನಿಲುವು ಅವಳನ್ನು ಸರ್ವ ರೀತಿಯಲ್ಲಿ ಬೆಳೆಯದಿರಲು ಬಂಧಿಸಿದೆ. ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಸಮಾಜ ನೆರವಾಗಬೇಕು. ಮಹಿಳೆಯರ ಕುರಿತು ಇತ್ತೀಚೆಗೆ ಪಾಶ್ಚಿಮಾತ್ಯರಿಗಿಂತಲೂ ಭಾರತದಲ್ಲಿ ದೃಷ್ಟಿಕೋನ ಬದಲಾಗುತ್ತಿದೆ. ಮಹಿಳೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸುದೃಢವಾಗಲು ಅನೇಕ ಭೂಮಿಕೆಗಳನ್ನು ಭಾರತ ಇಂದು ಸೃಷ್ಟಿಸಿದೆ. ಅದನ್ನು ಮಹಿಳೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಡಾ.ಶೋಭನಾ ಪಟ್ಟೇದ ಮಾತನಾಡಿ, ಮಹಿಳೆ ಪುರುಷನಿಗಿಂತ ಶಾರೀರಿಕವಾಗಿ ಭಿನ್ನವಾಗಿದ್ದಾಳೆ. ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಅತಿ ಕಡಿಮೆಯಿದೆ. 18 ವಷರ್ ತುಂಬುವ ಮೊದಲೇ ಮದುವೆಯಾಗುವ ಹೆಣ್ಣುಮಕ್ಕಳು ಮುಂದೆ ಅನೇಕ ಶಾರೀರಿಕ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಅದನ್ನು ತಡೆಗಟ್ಟಲು ವಿಶೇಷವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎಸ್. ತೇರದಾಳ ಮಾತನಾಡಿ, ಮಹಿಳೆ ಶಕ್ತಿ- ಸಾಮರ್ಥ್ಯಗಳ ಮೂಲಕ ಸರ್ವತೋಮುಖ ಬೆಳವಣಿಗೆಗೆ ಸಿದ್ಧಳಾಗಬೇಕು ಎಂದರು. ಡಾ.ಸುಮನ ಮುದ್ದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೋಭಾ ನಾಯಕ ಸ್ವಾಗತಿಸಿದರು. ಡಾ. ಮಧುಶ್ರೀ ಕಳ್ಳಿಮನಿ ಪರಿಚಯಿಸಿದರು. ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಡಾ. ದೀಪಾ ಅಂಟಿನ ನಿರೂಪಿಸಿದರು. ಡಾ. ಮಂಜುಳಾ ಜಿ.ಕೆ. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts