More

    ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಲು ಆಗ್ರಹ

    ಕಾಗವಾಡ, ಬೆಳಗಾವಿ: ಮಹಾರಾಷ್ಟ್ರ ರಾಜ್ಯದ ಶಿವಸೇನಾ ಗುಂಡಾಗಳು ಕರ್ನಾಟಕ ಬಸ್‌ಗಳಿಗೆ ಹಾನಿ ಮಾಡುತ್ತಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಸೋಮವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

    ರಾಜ್ಯದ ಸರ್ಕಾರಿ ಬಸ್‌ಗಳಿಗೆ ಹಾನಿ ಮಾಡುತ್ತಿರುವ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ರಾಜೇಶ ಬುರ್ಲಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
    ಕರವೇ ಮುಖಂಡ ಶಿವಾನಂದ ನವಿನ್ಯಾಳ ಮಾತನಾಡಿ, ಪ್ರತಿವರ್ಷ ಶಿವಸೇನಾ ಗೂಂಡಾಗಳು ಗಡಿ ವಿಚಾರವಾಗಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಯುವುದು, ಕಲ್ಲು ಎಸೆಯುವ ಮೂಲಕ ಹಾನಿಯುಂಟು ಮಾಡುತ್ತಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಮುಖಂಡರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮೇಲಿಂದ ಮೇಲೆ ಗಡಿ ಸಮಸ್ಯೆ ಎತ್ತಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಕಾಗವಾಡ ಕರವೇ ಅಧ್ಯಕ್ಷ ಸಿದ್ದು ಒಡೆಯರ, ಗಣೇಶ ಕೊಳೇಕರ, ಫಾರೂಖ್ ಅಲಾಸ್ಕರ್, ಜನಾರ್ದನ ದೊಂಡಾರೆ, ಅಸ್ಲಮ್ ಜಮಾದಾರ್, ಕೃಷ್ಣ ದೊಂಡಾರೆ, ದಯಾನಂದ ಕೊಳಲಗಿ, ಸಚಿನ ಪಾಟೀಲ, ಮಹಾಂತೇಶ ಬಡಿಗೇರ, ಮೌನೇಶ ಬಡಿಗೇರ, ಉಮೇಶ ಮಟಕೇರಿ, ಅಪ್ಪಾಲಾಲ ಜಮಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts