More

    ಮದ್ಯದಂಗಡಿ ಆರಂಭಿಸಬೇಡಿ

    ಕಲಘಟಗಿ: ಪಟ್ಟಣದ ಭಾಗವಾನ ಓಣಿಯಲ್ಲಿ ಎಂಎಸ್​ಐಎಲ್ ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ ಅಬಕಾರಿ ನಿರೀಕ್ಷಕ ಅಮೃತ ಗುಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಪಟ್ಟಣದ ಭಾಗವಾನ ಓಣಿಯ ಸವಣೂರ ಅಗಸಿಯಲ್ಲಿನ ಜಯಪಾಲ ಕರೆಣ್ಣವರ ಕಟ್ಟಡದಲ್ಲಿ ಮದ್ಯದ ಅಂಗಡಿ ತೆರೆಯಲಾಗುತ್ತಿದೆ. ಈ ಪ್ರದೇಶದಲ್ಲಿ ವಸತಿಗೃಹಗಳಿವೆ. ಸನಿಹದಲ್ಲಿ ಹಜರತ್ ಪಿಲ್ ಮೆಹಬೂಬ್ ಸುಪಾರಿ ದರ್ಗಾ, ಮಹಾಲಕ್ಷಿ್ಮ ದೇವಸ್ಥಾನ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕೋಚಿಂಗ್ ಸೆಂಟರ್​ಗಳಿವೆ. 3 ವರ್ಷಕ್ಕೊಮ್ಮೆ ಗ್ರಾಮದೇವಿ ಜಾತ್ರಾ ಮಹೋತ್ಸವ, ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ, ಮನರಂಜನೆ ಆಟಗಳು ನಡೆಯುತ್ತವೆ. ಗುಡ್​ನ್ಯೂಸ್ ಕಾಲೇಜ್​ಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳುತ್ತಾರೆ. ಇಲ್ಲಿ ಮದ್ಯದಂಗಡಿ ಆರಂಭಿಸಿದರೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಮದ್ಯದಂಗಡಿ ಬಂದ್ ಮಾಡಬೇಕು. ಅಧಿಕಾರಿಗಳು ಮದ್ಯದಂಗಡಿ ತೆರೆಯಲು ಪರವಾನಗಿ ನೀಡಿದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಸಿಪಿಐ ವಿಜಯ ಬಿರಾದಾರ, ಎಂಎಸ್​ಐಎಲ್ ಜಿಲ್ಲಾ ಮ್ಯಾನೇಜರ್ ಕೃಷ್ಣಮೂರ್ತಿ, ಪಪಂ ಸದಸ್ಯ ಬಸವರಾಜ ಕಡ್ಲಾಸ್ಕರ್, ಸ್ಥಳೀಯ ನಿವಾಸಿಗಳಾದ ಸೋಯಲ್ ಪಾಟೀಲ, ರಜೀಯಾ ದಲಾಲ್, ಜೈಲಾನಿ ಬಾಲಚಿಂಗ, ಸಾದ್ವಿಕ್ ಬೊಮ್ಮನಹಳ್ಳಿ, ಮೇರಲಿ ತೋರಗಲ್, ಸಯ್ಯದ್ ಮೆಹಬೂಬ್ ಪಟೇಲ್, ಮೌಲಾಜಿ ಪಂಡಿತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts