More

    ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ


    ಯಾದಗಿರಿ: ನಾಡಿನ ಸಾವಿರಾರು ಮಠ-ಮಾನ್ಯಗಳಿಂದ ದಿನಂಪ್ರತಿ ಪರಿಣಾಮಕಾರಿಯಾದ ಪ್ರವಚನಗಳಿಂದ ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ ಕ್ರಾಂತಿಯನ್ನುಂಟುತ್ತಿವೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ನುಡಿದರು.

    ಇಲ್ಲಿನ ಸಿಪಿಎಸ್ ಶಾಲಾ ಮೈದಾನದಲ್ಲಿ ಫಕೀರೇಶ್ವರ ಮಠದ ಶ್ರೀ ಗುರುಪಾದ ಸ್ವಾಮಿಗಳ ಪಟ್ಟಾಕಾರ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ, ಮಠ, ಮಂದಿರ, ಮಸೀದಿ, ಚಚರ್್ಗಳು ಸೇರಿದಂತೆ ಸರ್ವ ಜಾತಿಯ ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ ಶ್ರದ್ಧಾ ಕೇಂದ್ರಗಳು ವಿಭಿನ್ನ ರೀತಿಯಿಂದ ಕರೆದರು ಅವುಗಳೆಲ್ಲವು ಮಾಡುವುದು ಸಮಾಜಮುಖಿ ಸಾಂಸ್ಕೃತಿಕ ಮತ್ತು ಧಾಮರ್ಿಕ ಆಂದೋಲನವೇ ಆಗಿದೆ ಎಂದರು.

    ಶಾಸಕ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ, ಅನ್ನ,ಅಕ್ಷರ,ಜ್ಞಾನ ದಾಸೋಹಗಳ ಮೂಲಕ ಮಠಗಳು ಲಕ್ಷಾಂತರ ಬಡ ಜನರ ಬಾಳಲ್ಲಿ ಆಶಾಕಿರಣವಾಗಿವೆ. ಹಸಿದು ಬಂದವರಿಗೆ ತುತ್ತಿನ ಬುತ್ತಿಯ ಜತೆಗೆ ನೆತ್ತಿಯ ಬುತ್ತಿಯನ್ನು ನೀಡಿವೆ ಎಂದು ಬಣ್ಣಿಸಿದರು.

    ಸಕರ್ಾರಗಳಿಂದಾಗದ ಹಲವು ಕಾರ್ಯಗಳು ಇಂದು ಮಠಗಳಿಂದ ಆಗಿವೆ. ಅನೇಕ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ದೊಡ್ಡದೊಡ್ಡ ಶಿಕ್ಷಣ ಸಂಸ್ಥೆಗಳು ನಾಡಿನಲ್ಲಿನ ಮಠಗಳು ನಡೆಸುತ್ತ ಬಂದಿವೆ. ವೀರಶೈವ ಮಠಗಳು ಜಾತಿ,ಮತ, ಪಂತವೆನ್ನದೇ ಸಮಾಜಕ್ಕೆ ಮತ್ತು ಧರ್ಮಕ್ಕೆ ಬೆಳಕು ಚೆಲ್ಲುವ ಕೆಲಸ ಮಾಡಿವೆ. ಸಮಾಜ ದಾರಿ ತಪ್ಪುತ್ತಿರುವುದುನ್ನು ಮನಗಂಡು ಸರಿಯಾದ ಮಾರ್ಗಕ್ಕೆ ತರುತ್ತಿವೆ ಎಂದರು.
    ಮಾದನ ಹಿಪ್ಪರಗಿ ವಿರಕ್ತಮಠದ ಪೂಜ್ಯ ಅಭಿನವ ಶಿವಲಿಂಗ ಸ್ವಾಮಿಗಳು, ಜೇರಟಗಿ ಮಹಾಂತ ಸ್ವಾಮಿಗಳು, ವಿಜಯಪುರ ಸಿದ್ದಲಿಂಗ ದೇವರು, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ತುನ್ನೂರು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ.ವೇದಮೂತರ್ಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts