More

    ಭಾರಿ ಮಳೆ-ಗಾಳಿ: ಬೈಕ್ ಸವಾರನ ಮೇಲೆ ಉರುಳಿದ ಮರ

    ರಿಪ್ಪನ್‌ಪೇಟೆ: ಸಮೀಪದ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಹಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿ ಮೇಲೆ ಬುಧವಾರ ರಾತ್ರಿ ಅಕೇಶಿಯಾ ಮರ ಉರುಳಿ ಬಿದ್ದಿದೆ. ಹಾಲಂದೂರು ನಿವಾಸಿ ಗುರುರಾಜ ರಾತ್ರಿ ಹುಂಚ-ನಾಗರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ರಸ್ತೆಯ ಬದಿಯಲ್ಲಿದ್ದ ಅಕೇಶಿಯಾ ಮರವೊಂದು ಭಾರಿ ಗಾಳಿ ಮಳೆಗೆ ಬುಡಸಮೇತ ಸವಾರನ ಮೇಲೆ ಬಿದ್ದಿದೆ. ಬೈಕ್ ನಜ್ಜುಗುಜ್ಜಾಗಿದ್ದು ಗುರುರಾಜ್‌ಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಕೈ ಮುರಿದಿದೆ. ಚಿಕಿತ್ಸೆಗಾಗಿತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts