More

    ಭಾರತೀಯರು ಆಯುರ್ವೇದದ ಬಳಕೆದಾರರಾಗಲಿ

    ಬಾಗಲಕೋಟೆ: ಜಗತ್ತನ್ನೇ ಸೆಳೆದ ಶ್ರೇಷ್ಠ ವೈದ್ಯಕೀಯ ಪದ್ಧತಿಗಳಲ್ಲಿ ಭಾರತದ ಆಯುರ್ವೇದಿಕ ಪದ್ಧತಿಯು ಸೇರಿಕೊಂಡಿದ್ದು, ಭಾರತೀಯರಾದ ನಾವುಗಳು ಅದರ ಪಾಲುದಾರರಾಗಬೇಕು ಎಂದು ಡಾ. ಪ್ರಲ್ಹಾದ ಗಂಗಾವತಿ ತಿಳಿಸಿದರು.

    ನಗರದ ಎಂಆರ್‌ಎನ್ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ನಡೆದ ಧನ್ವಂತರಿ ಜಯಂತಿ ಹಾಗೂ ೮ ನೇ ರಾಷ್ಟ್ರೀಯ ಆಯುರ್ವೇದ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುರ್ವೇದಿಕ ಪದ್ಧತಿಯ ತವರೂರಿನಲ್ಲಿ ನಾವುಗಳಿರುವುದರಿಂದ ಅದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.

    ರಾಷ್ಟ್ರೀಯ ಆಯುರ್ವೇದಿಕ ದಿನಾಚರಣೆಯ ಅಂಗವಾಗಿ ಪ್ರಾಧ್ಯಾಪಕರುಗಳ ಸಹಕಾರದೊಂದಿಗೆ ವಿವಿಧ ವಿಭಾಗಗಳಿಂದ ಹಲವು ಸೃಜನಶೀಲಾತ್ಮಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ಕಾಲೇಜಿನ ಡೀನ ಆದ ಡಾ. ಶಿವಕುಮಾರ ಗಂಗಾಲ, ಪ್ರಾಧ್ಯಾಪಕರಾದ ಡಾ.ವಿಜಯಕುಮಾರ ಚವಡಿ, ಡಾ. ದೀಪಾ ಗಂಗಾಲ, ಡಾ. ರೇಖಾ ಸಕ್ಕರಿ, ಡಾ. ರಜನಿ ದಡೆದ, ಡಾ. ಈಶ್ವರ ಪಾಟೀಲ, ಡಾ. ಅತಿರಾ ಸೋಮನ, ಡಾ. ವೀಣಾ ಕುಲಕರ್ಣಿ, ಡಾ.ಅಶ್ವಿನಿ ಹೊಸಮನಿ, ಸ್ವರ್ಣ ಮಂದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts