More

    ಬ್ಯೂಟಿ ಪಾರ್ಲರ್ ಯುವತಿ ಮೇಲೆ ಆಸಿಡ್ ಎರಚಿದ ಆರೋಪಿಗಳ ಬಂಧನ

    ಶೃಂಗೇರಿ: ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ್ದ ಪ್ರಕರಣದ ಆರೋಪ ಮಂಗಳವಾರ ಸಾಬೀತಾಗಿದ್ದು ಜಿಲ್ಲಾ ನ್ಯಾಯಾಧೀಶ ಮಂಜುನಾಥ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.
    ಎಸ್​ಟಿಡಿ ಬೂತ್ ನಡೆಸುತ್ತಿದ್ದ ಗಣಿ ಅಲಿಯಾಸ್ ಗಣೇಶ್, ಕಬೀರ್, ಕಾರ್ಕಳದ ಅಬ್ದುಲ್ ಮಜೀದ್ ಹಾಗೂ ವಿನೋದ್ ಅಪರಾಧಿಗಳು.
    ಮೆಣಸೆಯಲ್ಲಿ ವಾಸವಾಗಿದ್ದ ಬ್ಯೂಟಿ ಪಾರ್ಲರ್ ಯುವತಿ ಮೇಲೆ 2015ರ ಏ.18ರಂದು ನಾಲ್ಕು ಮಂದಿ ಆಸಿಡ್ ಎರಚಿದ್ದರು. ಆಸಿಡ್ ಎರಚಿದ 24 ಗಂಟೆಯೊಳಗೆ ಅಂದಿನ ಸಿಪಿಐ ಸುಧೀರ್ ಎಂ. ಹೆಗಡೆ ಅವರು ನಾಲ್ಕೂ ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಎಸ್ಪಿ ಶ್ರುತಿ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಮಹೇಶ್, ಪ್ರಸನ್ನ ಭಟ್ ಇತರರು ತನಿಖೆ ನಡೆಸಿದ್ದರು.
    ಮಂಗಳವಾರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಜಡ್ಜ್ ಮಂಜುನಾಥ್ ಸಂಗೆರೇಶ್ ಅವರು ನಾಲ್ವರನ್ನು ಅಪರಾಧಿಗಳೆಂದು ಘೊಷಿಸಿ ಶಿಕ್ಷೆಯ ಪ್ರಮಾಣವನ್ನು ಜು.15ರವರೆಗೆ ಕಾಯ್ದಿರಿಸಿದ್ದಾರೆ. ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಮಂಗಳವಾರ ಚಿಕ್ಕಮಗಳೂರಿನಲ್ಲಿ ಪೊಲೀಸರು ಬಂಧಿಸಿದರು.
    ಸರ್ಕಾರದ ಪರವಾಗಿ ಮೊದಲು ಪಿ.ಸುರೇಶ್​ಕುಮಾರ್, ರಾಜಗೀರ್ ಬೀರಪ್ಪ ವಾದ ಮಂಡಿಸಿದ್ದರು. ಪ್ರಸ್ತುತ ಮಮತಾ ಸಂತ್ರಸ್ತೆ ಪರ ವಾದ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts