More

    ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ

    ಬಾಗಲಕೋಟೆ: ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರು ಬೈಕ್ ರ‍್ಯಾಲಿ ಮೂಲಕ ಸಂಚರಿಸಿ ಗಮನ ಸೆಳೆದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ನೌಕರರ ಸಂಘದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಬುಧವಾರ ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಚಾಲನೆ ನೀಡಿ ಮಾತನಾಡಿದ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೇ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ತಿಳಿಸಿದರು.

    ಜಾಗೃತಿ ಅಭಿಯಾನದ ಬೈಕ್ ರ‍್ಯಾಲಿ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ಸರ್ಕಲ್, ನಗರಸಭೆ ಸರ್ಕಲ್, ಸರಕಾರಿ ಆಸ್ಪತ್ರೆ, ಕಾಳಿದಾಸ ಸರ್ಕಲ್, ವಿದ್ಯಾಗಿರಿ ಕಾಲೇಜ ಸರ್ಕಲ್, ವಿದ್ಯಾಗಿರಿ ೬ನೇ ಕ್ರಾಸ್, ಬಸ್ ನಿಲ್ದಾಣ, ವಿದ್ಯಾಗಿರಿ ೧೯ ಮತ್ತು ೨೨ನೇ ಕ್ರಾಸ್, ಕೆಂಪ್ ರೋಡ್, ಕೆರೂಡಿ ಆಸ್ಪತ್ರೆ, ವಾಸವಿ ಚಿತ್ರಮಂದಿರ, ಹಳೇ ಪ್ರವಾಸಿ ಮಂದಿರ, ಹಳೆ ಜಿ.ಪಂ ರಸ್ತೆ, ಕಾಯಿಪಲ್ಲೆ ಮಾರ್ಕೇಟ್, ಪಂಕಾ ಮಸೀದಿ ಮಾರ್ಗವಾಗಿ ವಲ್ಲಭಾಯಿ ಪೊಲೀಸ್ ಚೌಕ್, ಹಳೇ ಅಡತ ಬಜಾರ, ಹಳೆ ಶಿರೂರ ಅಗಸಿ, ರೈಲ್ವೆ ಗೇಟ್, ಬಾಗಲಕೋಟೆ ಬಸ್ ನಿಲ್ದಾಣ, ದಡ್ಡೇನವರ ಆಸ್ಪತ್ರೆ ಮಾರ್ಗವಾಗಿ ಮರಳಿ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಂಡಿತು.

    ರ‍್ಯಾಲಿಯಲ್ಲಿ ಭಾಗವಹಿಸಿದ ಬೈಕ್‌ಗಳಿಗೆ ಮತದಾನ ಜಾಗೃತಿಯ ಘೋಷಣಾ ಫಲಕಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಮತದಾನ ಜಾಗೃತಿ ಸಂದೇಶವುಳ್ಳ ಟೀಶರ್ಟ ಮತ್ತು ಕ್ಯಾಪ್‌ಗಳನ್ನು ಧರಿಸಿ ಎಲ್ಲರ ಗಮನ ಸೆಳೆದರು. ಜಾಥಾದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ಸರಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಪರಿಷತ್ ಸದಸ್ಯ ಸತ್ಯರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವಿಠಲ ವಾಲಿಕಾರ, ಗೌರವಾಧ್ಯಕ್ಷರು ಗೋಪಾಲ ನೀಲನಾಯಕ, ಸುರೇಶ ಇಂಜಿಗನೇರಿ, ಹಿರಿಯ ಉಪಾದ್ಯಕ್ಷ ರಮೇಶ ಚವ್ಹಾಣ, ಉಪಾದ್ಯಕ್ಷ ವೆಂಕಟೇಶ ತಿಮ್ಮನಾಯಕ ಸೇರಿದಂತೆ ಎಲ್ಲ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts