ಗೋಕರ್ಣ: ಇಲ್ಲಿನ ಕುಡ್ಲೆ ಬೀಚ್ ಸಮುದ್ರದಲ್ಲಿ ಶನಿವಾರ ಮಧ್ಯಾಹ್ನ ಈಜಲು ತೆರಳಿ ಅಲೆಗೆ ಸಿಲುಕಿ ತೊಂದರೆಯಲ್ಲಿದ್ದ ಬೆಂಗಳೂರಿನ ಕುಶಾಲ ಗೌಡ ಮತ್ತು ಪ್ರತಾಪ ಗೌಡ ಎಂಬ ಯುವಕರಿಬ್ಬರನ್ನು ಲೈಫ್ ಗಾರ್ಡ್ಗಳಾದ ಸಂಜೀವ ಹೊಸ್ಕಟ್ಟ ಮತ್ತು ಕುಮಾರ ಅಂಬಿಗ ರಕ್ಷಿಸಿ ದಡಕ್ಕೆ ತಂದರು. ಇವರು ತಮ್ಮ ಇತರ 7 ಸ್ನೇಹಿತರ ಜೊತೆಗೆ ನೀರಿಗಿಳಿದಾಗ ಈ ಘಟನೆ ನಡೆದಿದೆ.