More

    ಬಾಡಿಯಾಳಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ

    ಯಾದಗಿರಿ: ಇಲ್ಲಿನ ಬಿಜೆಪಿ ನಾಯಕ ಶರಣಗೌಡ ಬಾಡಿಯಾಳಗೆ ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಪಕ್ಷದ ಅಧ್ಯಕ್ಷ ಬಿವೈ ವಿಜಯೇಂದ್ರರಿಗೆ ಭೇಟಿ ಮನವಿ ಸಲ್ಲಿಸಿದೆ.

    ಶರಣಗೌಡ ಬಾಡಿಯಾಳ ಕಳೆದೆರಡು ದಶಕದಿಂದ ಪಕ್ಷದ ವಿವಿಧ ಮೋರ್ಚಾ ಗಳ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾಗಿ, ಗುರುಮಠಲ್ ಮಂಡಲ ಕಾರ್ಯದರ್ಶಿಯಾಗಿ, ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಕಲ್ಯಾಣ ಕನರ್ಾಟಕ ಪ್ರದೇಶದಲ್ಲಿ ಅತೀಹೆಚ್ಚು ಸದಸ್ಯತ್ವ ಮಾಡಿದ 2ನೇ ಜಿಲ್ಲೆಯನ್ನಾಗಿಸಿದ್ದಾರೆ ಎಂದು ಮುಖಂಡರು ವಿವರಿಸಿದರು.

    ಸಧ್ಯ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಅಗತ್ಯವಿದೆ. ಬರುವ ಲೋಕಸಭೆ, ಜಿಪಂ, ತಾಪಂ ಮತ್ತು ವಿಧಾನ ಪರಿಷತ್ತಿನ ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಬಾಡಿಯಾಳ ಸಮರ್ಥ ನಾಯಕರಾಗಿದ್ದಾರೆ. ಅಲ್ಲದೆ, ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಸುರಪುರ, ಶಹಾಪುರ ಮತ್ತು ಯಾದಗಿರಿ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಗುರುಮಠಕಲ್ ಕ್ಷೇತ್ರದ ಮುಖಂಡರು ಇದುವರೆಗೂ ಜಿಲ್ಲಾಧ್ಯಕ್ಷರಾಗಿಲ್ಲ ಎಂದರು.

    ಕಳೆದ ಬಾರಿ ಕೊನೆ ಕ್ಷಣದಲ್ಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಬಾಡಿಯಾಳ ವಂಚಿತರಾಗಿದ್ದಾರೆ. ಆದರೂ ಪಕ್ಷದ ಆದೇಶ ಪಾಲನೆ ಮಾಡಿ, ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

    ಮನವಿಗೆ ಸ್ಪಂದಿಸಿದ ವಿಜಯೇಂದ್ರ, ಹೊಸ ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲಾ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಕಾರಾತ್ಮಕವಾಗಿ ತಿಳಿಸಿದ್ದಾರೆ ಎಂದು ಮುಖಂಡರು `ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts