ಭಟ್ಕಳ: ಕರೊನಾ ಸೇನಾನಿಗಳಾಗಿ ಹಗಲು- ರಾತ್ರಿ ಕಾರ್ಯನಿರ್ವಹಿಸುತ್ತಿರುವ ಜಾಲಿ ಪಟ್ಟಣ ಪಂಚಾಯಿತಿಯ 15 ಪೌರಕಾರ್ವಿುಕರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಪಟ್ಟಣದಲ್ಲಿ ಆತಂಕ ಹೆಚ್ಚಿದ್ದರೂ ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ವಿುಕರ ಸೇವೆ ಶ್ಲಾಘನೀಯ. ಕೆಲವು ಸೀಲ್ಡೌನ್ ಪ್ರದೇಶದಲ್ಲೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಇಂತಹ ಕಾರ್ವಿುಕರ ಹಿತದೃಷ್ಟಿಯಿಂದ, ಮುಂಜಾಗ್ರತೆಯ ಸಲುವಾಗಿ 15 ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕರ್ತವ್ಯದಲ್ಲಿರುವ ಪೌರ ಕಾರ್ವಿುಕರಿಗೆ ಯಾವುದೆ ಲಕ್ಷಣಗಳಿಲ್ಲ. ಸೀಲ್ಡೌನ್ ಪ್ರದೇಶಗಳಲ್ಲಿ ಅವರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ತಿಂಗಳಿಗೊಮ್ಮೆ ಅವರಿಗೆ ಕೋವಿಡ್- 19 ಪರೀಕ್ಷೆ ಸೇರಿ 6 ತಿಂಗಳಿಗೊಮ್ಮೆ ಮಾಸ್ಟರ್ ಚೆಕ್ಅಪ್ ನಡೆಸುತ್ತೇವೆ ಎಂದು ಪ್ರಭಾರ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ತಿಳಿಸಿದ್ದಾರೆ.