More

    ಪಶು ಆಸ್ಪತ್ರೆ ಆನವಟ್ಟಿಯಲ್ಲೇ ಇರಲಿ, ಸ್ಥಳಾಂತರ ಸಲ್ಲದು

    ಸೊರಬ: ಆನವಟ್ಟಿಯಲ್ಲಿರುವ ಪಶುವೈದ್ಯ ಆಸ್ಪತ್ರೆಯನ್ನು ಬೇರಡೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಆನವಟ್ಟಿ ಹೋಬಳಿ ಹಾಲು ಉತ್ಪಾದಕರ ಸಂಘ, ಆನವಟ್ಟಿ ಹಿತರಕ್ಷಣ ವೇದಿಕೆ ಹಾಗೂ ರೈತಪರ ಹೋರಾಟಗರು ಗುರುವಾರ ಆನವಟ್ಟಿ ಪಪಂ ಮುಖ್ಯಾಧಿಕಾರಿ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಪಶುವೈದ್ಯ ಆಸ್ಪತ್ರೆ ಹಾಗೂ ಸಹಾಯಕ ನಿರ್ದೇಶಕರ ಕೇಂದ್ರ ಕಚೇರಿಯನ್ನು ಆನವಟ್ಟಿಯಿಂದ ಮೂರು ಕಿ.ಮೀ. ದೂರವಿರುವ ಸಮನವಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡವ ಬಗ್ಗೆ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿದ್ದರೆ ಹಾಗೂ ಪಪಂ ಸಭೆಯಲ್ಲಿ ನಡಾವಳಿ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ತೊಂದರೆ ಆಗಲಿದೆ. ಜಾನುವರುಗಳನ್ನು ಆನವಟ್ಟಿ ಕೇಂದ್ರ ಸ್ಥಳಕ್ಕೆ ತರಲು ಉಪಯುಕ್ತವಾಗಿದೆ. ಪಶುಗಳಿಗೆ ಅಗತ್ಯ ಇರುವ ಔಷಧ ಅಂಗಡಿಗಳ ಸೌಲಭ್ಯವಿದೆ. ಕೇವಲ ಆಸ್ಪತ್ರೆ ಆವರಣಕ್ಕೆ ನೀರು ಬರುತ್ತದೆ ಎಂಬ ಕಾರಣಕ್ಕಾಗಿ ಸ್ಥಳಾಂತರ ಮಾಡುವುದು ಸಲ್ಲದು ಎಂದು ಕಿಡಿ ಕಾರಿದ್ದಾರೆ.
    ಮುಖಂಡರಾದ ಎ.ಎಲ್.ಅರವಿಂದ್, ವಾಣಿ ರಾಜಪ್ಪ, ಗೀತಾ ಮಲ್ಲಿಕಾರ್ಜುನ್, ದ್ವಾರಳ್ಳಿ ಮಲ್ಲಿಕಾರ್ಜುನ್ ಗುತ್ತೇರ್, ಗಜಾನನ್ ರಾವ್, ಗುರು ಪ್ರಸನ್ನ ಗೌಡ, ಎಸ್.ಎನ್.ಸುರೇಶ್, ಹುಣಸಳ್ಳಿ ಶಿವಣ್ಣ, ಹನುಮಂತಪ್ಪ, ರೈತ ಸಂಘದ ಮಂಜು ಹುಣಸಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts