ಶೃಂಗೇರಿ: ಅಶ್ವಯುಜ ಕೃಷ್ಣ ಪಂಚಮಿ ದಿನವಾದ ಶುಕ್ರವಾರ ಶ್ರೀ ಶಾರದಾಪೀಠದ 36ನೇ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಪಟ್ಟಾಭಿಷಿಕ್ತರಾದ ಹಿನ್ನೆಲೆಯಲ್ಲಿ ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷಪೂಜೆ ನೆರವೇರಿತು. ಜಗದ್ಗುರುಗಳು ಶ್ರೀ ಶಂಕರಾಚಾರ್ಯ, ಶ್ರೀ ತೋರಣಗಣಪತಿ, ಶ್ರೀ ಶಾರದಾಂಬೆ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. 1989ರಲ್ಲಿ ಅವರು ವ್ಯಾಖ್ಯಾನ ಸಿಂಹಾಸನ ಏರಿದ ದಿನವಾದ ಪ್ರಯುಕ್ತ ಮಠದ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.