ಚಿತ್ರದುರ್ಗ: ಕುಷ್ಠರೋಗ ಮಾರಣಾಂತಿಕ ರೋಗವಲ್ಲ, ಚಿಕಿತ್ಸೆಯಿಂದ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದು ತಾಲೂಕು ಕುಷ್ಠ ರೋಗ ಮೇಲ್ವಿಚಾರಣಾ ಅಧಿಕಾರಿ ವೈ.ತಿಪ್ಪೇಶ್ ಹೇಳಿದರು.
ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಚಿತ್ರದುರ್ಗ ತಾಲೂಕಿನ ಆರೋಗ್ಯ ಕ್ಷೇಮ ಉಪ ಕೇಂದ್ರಗಳ ಸಮುದಾಯ ಆ ರೋಗ್ಯಾಧಿಕಾರಿಗಳಿಗೆ ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ ಮೇಲ್ವಿಚಾರಣ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕು ಷ್ಠರೋಗದ ನಿರ್ಮೂಲನೆ ಸಾಧ್ಯವಾಗಿದ್ದರೂ ಇನ್ನೂ ಕೆಲವು ವರ್ಷಗಳವರೆಗೆ ಹೊಸ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಮತ್ತೆ ಈ ರೋಗ ಕಾಣಿಸಿಕೊಳ್ಳದಂತೆ ನಿರಂತರ ನಿಗಾ ವಹಿಸ ಬೇಕಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಕುಷ್ಠರೋಗದ ವಿರುದ್ಧದ ಕಳಂಕ ಮತ್ತು ಪೂರ್ವಾ ಗ್ರ ಹ ಗಣನೀಯವಾಗಿ ಕಡಿಮೆಯಾಗಿದೆ. ಪರಿಣಾಮಕಾರಿ ಚಿಕಿತ್ಸೆ, ಹೆಚ್ಚಿದ ಜಾಗೃತಿಯಿಂದಾಗಿ ರೋಗ ಗುಣಪಡಿಸಲು ಸಾಧ್ಯವಾಗುತ್ತಿದೆ. ರಾಜ್ಯಾದ್ಯಂತ ನವೆಂಬರ್ 15ರಿಂದ ಡಿಸೆಂಬರ್ 2ರವರೆಗೆ ಈ ರೋಗ ಪ್ರಕರಣ ಪತ್ತೆ ಅಭಿಯಾನ ನಡೆಯಲಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿಗಳಾದ ಗಂಗಾಧರೆಡ್ಡಿ, ಗುರುಮೂರ್ತಿ, ರಂಗಾರೆಡ್ಡಿ ಮತ್ತಿತರರು ಇದ್ದರು.