ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್.ಅರುಣ್ಕುಮಾರ್ ಮಾತನಾಡಿ, ಸಂವಿಧಾನದ ಅಡಿಯಲ್ಲಿ ನೀಡಲಾದ ಮೂಲ ಹಕ್ಕುಗಳನ್ನು ಜಾರಿ ಮಾಡುವ ಜವಾಬ್ದಾರಿ ಸರ್ಕಾರಗಳದ್ದು. ದಾವಣಗೆರೆ ಪಾಲಿಕೆ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ಸಂವಿಧಾನ ಆಶಯದಂತೆ ವಸತಿ ಹಕ್ಕಿಗೆ ಮಾನ್ಯತೆ ನೀಡಬೇಕು. ಅತಿವೃಷ್ಟಿಯಿಂದಾಗಿ ಸ್ಲಂ ಜನ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದು ತಪ್ಪಬೇಕು ಎಂದರು.
ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಿವಿಧ ಕೊಳೆಗೇರಿಗಳಲ್ಲಿ 500 ಬಡ ಕುಟುಂಬಗಳಿದ್ದು, ಎಲ್ಲರೂ ಕೂಲಿಯಿಂದಲೇ ಜೀವನ ಮಾಡುತ್ತಿದ್ದಾರೆ. ಈ ನಿರಾಶ್ರಿತರಿಗೆ ಈ ಹಿಂದಿನ ಜಿಲ್ಲಾಧಿಕಾರಿ 41 ಎಕರೆ ಭೂಮಿ ಖರೀದಿಸಿದ್ದಾಗಿ ತಿಳಿಸಿದ್ದರು. ಆ ಜಾಗದಲ್ಲಿ ಯಾರಿಗೆ ನಿವೇಶನ ನೀಡಲಾಗಿದೆ ಎನ್ನುವ ಮಾಹಿತಿ ಬಹಿರಂಗ ಪಡಿಸಬೇಕು. ಇದಲ್ಲದೇ ಸ್ಲಂ ನಿವಾಸಿಗಳು, ಬಡವರಿಗೆ, ನಿಜವಾದ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಎಂ.ಶಬ್ಬೀರ್ ಸಾಬ್, ಜಿಲ್ಲಾಧ್ಯಕ್ಷೆ ಸಾವಿತ್ರಮ್ಮ, ಪರ್ವೀನ್ ಬಾನು, ರಜಿಯಾ, ಮಂಜುಳಾ, ಆರೀಫ್, ಗೀತಮ್ಮ, ಬೀಬಿಜಾನ್, ಶಂಷುದ್ದೀನ್, ಜ್ಯೋತಿ, ರಾಜೇಶ್ವರಿ, ಶಂಶೀದ್ಬಾನು, ರೇಷ್ಮಾ, ರೇಖಾ, ಯೂಸೂಫ್ ಸಾಬ್, ಚಮನ್ಸಾಬ್, ಸಲಾಂಸಾಬ್, ಸಿಕಂದರ್ ಇತರರಿದ್ದರು.