More

    ನಾಳೆ ಸೂಪರ್ ಸಂಸಾರ ನಾಟಕ

    ಬಾಗಲಕೋಟೆ: ರಾಜ್ಯದಲ್ಲಿ ಪ್ರಖ್ಯಾತಿ ಗಳಿಸಿರುವ ಕಲಾವಿದ ಡಾ. ಯಶವಂತ ಸರದೇಶಪಾಂಡೆ ನಿರ್ದೇಶನದ ಹಾಸ್ಯಭರಿತ ಸೂಪರ್ ಸಂಸಾರ ನಾಟಕ ನವನಗರದ ಡಾ. ಅಂಬೇಡ್ಕರ್ ಭವನದಲ್ಲಿ ಮಾ.26 ರಂದು ಸಂಜೆ 6.30 ಗಂಟೆಗೆ ಉಚಿತವಾಗಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ಗಿರೀಶ ಉಡುಪಿ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ವಾನ್ ಗ್ರುಪ್, ಬಸವೇಶ್ವರ ಸಹಕಾರಿ ಬ್ಯಾಂಕ್, ಬಾಗಲಕೋಟೆ ಹೋಟೆಲ್ ಅಸೋಸಿಯೇಷನ್ ವತಿಯಿಂದ ಅರ್ಪಿಸುವ ಹುಬ್ಬಳ್ಳಿಯ ಗುರು ಸಂಸ್ಥೆಯವರು ಅಭಿನಯಿಸುವ ಹಾಸ್ಯ ಭರಿತ ಸೂಪರ್ ಸಂಸಾರ ನಾಟಕ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ನುರಿತ ಕಲಾವಿದರು ಪಾತ್ರಗಳನ್ನು ನಿರ್ವಹಿಸುತ್ತಿದ್ದು ಕಲಾಪೋಷಕರು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
    ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾತನಾಡಿ, ಸೂಪರ್ ಸಂಸಾರ ನಾಟಕ ಕೌಟುಂಬಿಕ ಮನರಂಜನೆ ನೀಡಲಿದೆ. ಉಚಿತ ಪ್ರದರ್ಶನವಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ರಂಗಭೂಮಿ ಉಳಿಸುವ ಕೆಲಸವನ್ನು ಕಲಾ ಪೋಷಕರು ಮಾಡಬೇಕಾದ ಅಗತ್ಯವಿದೆ. ನಗರದ ಜನತೆ ಕುಟುಂಬ ಸಮೇತರಾಗಿ ಆಗಮಿಸಿ ನಾಟಕ ವೀಕ್ಷಿಸಬೇಕು ಎಂದು ಹೇಳಿದರು.
    ಪಕ್ವಾನ್ ಹೋಟೆಲ್ ಸ್ಥಾಪಕ ಪವನ ಸಿಮಿಕೇರಿ, ಇನ್ನರ್‌ವೀಲ್‌ನ ಶೋಭಾ ಕಾಮರೆಡ್ಡಿ, ಹೋಟೆಲ್ ಅಸೋಶಿಯೇಷನ್ ಪದಾಧಿಕಾರಿ ಚಂದ್ರಶೇಖರ ಶೆಟ್ಟರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts