More

    ನಾಮಧಾರಿ ಸಮುದಾಯ ಭವನಕ್ಕೆ 2 ಕೋಟಿ ರೂ.ಬಿಡುಗಡೆ

    ಸಿದ್ದಾಪುರ: ತಾಲೂಕು ನಾಮಧಾರಿ ಸಮಾಜದ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ. ಇದಕ್ಕೆ ಸಂಸದರು, ಸಚಿವ ಶಿವರಾಮ ಹೆಬ್ಬಾರ ಹಾಗೂ ಶಾಸಕಿ ರೂಪಾಲಿ ನಾಯ್ಕ ಬೆಂಬಲ ನೀಡಿದ್ದಾರೆ ಎಂದು ತಾಲೂಕು ನಾಮಧಾರಿ ಸಮಾಜದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಹೇಳಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಧಾರ್ವಿುಕ, ಸಾಮಾಜಿಕ ಅಭಿವೃದ್ಧಿಗಾಗಿ ಸಮಾಜವನ್ನು ಸಂಘಟಿಸ ಲಾಗಿದೆ. ಹೊಸೂರಿನಲ್ಲಿ 18 ಗುಂಟೆ 6 ಆಣೆ ಜಾಗದಲ್ಲಿ ಸಮುದಾಯ ಭವನ ನಿರ್ವಿುಸಲಾಗುತ್ತಿದೆ. ಈಗಾಗಲೇ ಸಂಸದರ, ಶಾಸಕರು, ಹಿಂದುಳಿದ ವರ್ಗ ಗಳ ಇಲಾಖೆಯಿಂದ 23.5 ಲಕ್ಷ ಹಣ ಸಮುದಾಯ ಭವನ ನಿರ್ವಣಕ್ಕೆ ಬಂದಿದೆ ಎಂದರು.

    ಗಮನಕ್ಕೆ ಬಂದಿಲ್ಲ: ತಮ್ಮ ಸಮಾಜದ ಕೆಲವು ಮುಖಂಡರು ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ನೀಡಿ ಸಮುದಾಯ ಭವನಕ್ಕೆ 5 ಕೋಟಿ ರೂ. ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಜಿ.ನಾಯ್ಕ, ಆ ಮನವಿಗೆ ನಾನೂ ಸಹಿ ಮಾಡಿದ್ದೇನೆ. ಮನವಿ ನೀಡಿದ ಕುರಿತು ಗಮನಕ್ಕೆ ಬಂದಿದೆ. ಅದಕ್ಕೆ ವಿಧಾನಸಭಾ ಅಧ್ಯಕ್ಷರು ಏನು ಭರವಸೆ ನೀಡಿದ್ದಾರೆ ಎಂದು ತಿಳಿದಿಲ್ಲ. ಅವರಿಂದ ಹಣ ಬಂದರೂ ಅದನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.

    ನಾಗರಾಜ ನಾಯ್ಕ ಬೇಡ್ಕಣಿ, ಕೃಷ್ಣಮೂರ್ತಿ ಕಡಕೇರಿ, ಎಸ್.ಕೆ. ಮೇಸ್ತ, ಪಪಂ ಸದಸ್ಯ ಗುರುರಾಜ ಶಾನಭಾಗ, ರವಿ ನಾಯ್ಕ, ಶ್ರೀಧರ ನಾಯ್ಕ, ಸುಧೀರ ಕೊಂಡ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts