More

    ನರಗುಂದದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ

    ನರಗುಂದ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕಾಗಿ ಪಟ್ಟಣದಲ್ಲಿ ಜ. 24 ರಂದು ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಂದ ಪಟ್ಟಣದಲ್ಲಿ ಶನಿವಾರ ಸಂಕೀರ್ತನಾ ಯಾತ್ರೆ ಜರುಗಿತು.

    7ನೇ ವಾರ್ಡ್​ನಲ್ಲಿ ಪುರುಷರಿಂದ ಪಂಜಿನ ಮೆರವಣಿಗೆ, 10ನೇ ವಾರ್ಡ್​ನಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಸಲಾಯಿತು. ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಅಜ್ಜಪ್ಪಗೌಡ ಪಾಟೀಲ, ಸಂಜು ನಲವಡೆ, ರಾಚನಗೌಡ ಪಾಟೀಲ ಹಾಗೂ ಪಟ್ಟಣದ ಪ್ರಮುಖ ಗಣ್ಯರಿಂದ ಗೋವು ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ತಾಲೂಕು ಸಂಯೋಜಕ ಸಂಗಣ್ಣ ಕಳಸಾ ಮಾತನಾಡಿ, ತಾಲೂಕಿನ ಕೊಣ್ಣೂರ ಮತ್ತು ಚಿಕ್ಕನರಗುಂದ ಹೋಬಳಿ ವ್ಯಾಪ್ತಿಯ 22 ಗ್ರಾಮಗಳಲ್ಲಿ ಜ. 31 ರಂದು ನಿಧಿ ಸಮರ್ಪಣಾ ಅಭಿಯಾನ ಜರುಗಲಿದೆ ಎಂದು ತಿಳಿಸಿದರು.

    ಶಂಕರಗೌಡ ಪಾಟೀಲ, ಮಂಜುನಾಥ ಬೆಳಗಾವಿ, ನಿಂಗಪ್ಪ ನಾಗನೂರ, ಮಹಾಂತೇಶ ಹಂಪಣ್ಣವರ, ಪ್ರದೀಪ ದೀಕ್ಷಿತ್, ವಿಠ್ಠಲ ಕಾಪ್ಸೆ, ಮಂಜು ಮೆಣಸಗಿ, ನಾಗರಾಜ ಚಿತ್ರಗಾರ, ಬಸವರಾಜ ಗಡೇಕಾರ, ವಿಠ್ಠಲ ಹವಾಲ್ದಾರ, ಜ್ಯೋತಿ ಪೂಜಾರ, ದೀಪಾ ಸುಬೇದಾರ, ಸಂದೀಪ ಸುಬೇದಾರ, ಪ್ರಶಾಂತ ಪಲ್ಲೇದ, ಶ್ರೀನಿವಾಸಪ್ರಸಾದ ಗುಜಮಾಗಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts