ಹಾನಗಲ್ಲ: ಮುಂಡಗೋಡ ತಾಲೂಕಿನ ಮಳಗಿಯಲ್ಲಿರುವ ಧರ್ವ ಜಲಾಶಯಕ್ಕೆ ಭಾರತೀಯ ಕೃಷಿ ಕಾರ್ವಿುಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ ನೇತೃತ್ವದಲ್ಲಿ ರೈತ ಸಮುದಾಯದೊಂದಿಗೆ ಮಂಗಳವಾರ ಬಾಗಿನ ಅರ್ಪಿಸಲಾಯಿತು.
ಎಂ.ಎಸ್. ಪಾಟೀಲ ಮಾತನಾಡಿ, ತಾಲೂಕಿನ ಅರ್ಧಭಾಗ ಧರ್ವ ಜಲಾಶಯದಿಂದಾಗಿ ನೀರಾವರಿ ಕ್ಷೇತ್ರವಾಗಿ ಬದಲಾಗಿದ್ದು, ಇದೀಗ ಮಂಜೂರಾಗಿರುವ ಬಾಳಂಬೀಡ ಏತ ನೀರಾವರಿ ಯೋಜನೆಯಿಂದಲೂ ತಾಲೂಕಿನ ಮತ್ತಷ್ಟು ಭಾಗ ನೀರಾವರಿಗೆ ಒಳಪಡಲಿದೆ. ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗಂಗಾ ಪೂಜೆ ನೆರವೇರಿಸಿದ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಧುಮತಿ ಪೂಜಾರ, ಹಾನಗಲ್ಲ ತಾಲೂಕಿನ ರೈತ ಸಮುದಾಯದ ಜೀವನಾಡಿಯಾಗಿರುವ ಧರ್ವ ಜಲಾಶಯ ತುಂಬಿ ಹರಿಯುವುದರಿಂದ ಕೃಷಿ ಭೂಮಿ ಸಮೃದ್ಧಿಯಾದ ಫಸಲು ನೀಡಲಿದೆ ಎಂದರು.
ಸಂಘಟನೆ ತಾಲೂಕಾಧ್ಯಕ್ಷ ಬಸವರಾಜ ಉತ್ತಂಗಿ, ಜಿಲ್ಲಾ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ತಾಲೂಕು ಕಾರ್ಯಾಧ್ಯಕ್ಷ ಮಹಲಿಂಗಪ್ಪ ಬಿದರಮಳಿ, ಅಬಿದಬಾಷಾ ಖಾದ್ರಿ, ಎನ್.ಬಿ. ಚನ್ನೂರ, ಪ್ರಕಾಶ ದಾನಪ್ಪನವರ, ಎನ್.ಎಂ. ಪೂಜಾರ, ರವಿರಾಜ ರಾಗಿಕೊಪ್ಪ, ಶೇಕಪ್ಪ ಮುಂಡಗೋಡ, ಅಹಮದ್ಖಾನ್ ಲಕ್ಷ್ಮೇಶ್ವರ, ಇಸಾಕ್ ಶಿರಗೋಡ, ಗಾಯಿತ್ರಿ ಕೊಲ್ಲಾಪುರ, ರಮೇಶ ವಡ್ಡರ ಇದ್ದರು.