More

    ದೊಡ್ಡ ನಾಯಕರಾಗುವ ಭ್ರಮೆ ಬಿಡಿ -ಯತ್ನಾಳ್‌ಗೆ ರೇಣುಕಾಚಾರ್ಯ ಟಾಂಗ್

    ದಾವಣಗೆರೆ: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡಿದರೆ ದೊಡ್ಡ ನಾಯಕ ಆಗುತ್ತೇನೆಂಬ ಹಗಲುಗನಸು ಕೈಬಿಡಿ. ಆ ಭ್ರಮೆಯಿಂದ ಹೊರಬನ್ನಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದರು.
    ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅನಗತ್ಯ ಟೀಕೆ ಮಾಡಿದರೆ ಲಾಭವಿಲ್ಲ. ವಿಜಯೇಂದ್ರ ಅವರನ್ನು ಗುರಿಯಾಗಿಸಿ ಮಾತನಾಡುವುದು ಶೋಭೆ ತರದು. ಇನ್ನಾದರೂ ಮಾತಿನ ಮೇಲೆ ನಿಗಾ ಇಡಿ ಎಂದು ಪ್ರತಿಕ್ರಿಯಿಸಿದರು.
    ಯತ್ನಾಳ್ ಸಂಘಟನೆ ಆಧಾರದ ಮೇಲೆ ಮಾತನಾಡಲಿ. ನಮಗೂ ಏರುಧ್ವನಿಯಲ್ಲಿ ಮಾತನಾಡಲು ಬರುತ್ತದೆ. ಈ ಹಿಂದೆ ಯತ್ನಾಳ್‌ರಿಗೆ ಕೇಂದ್ರ ಸಚಿವರಾಗಿ ಮಾಡಿದ್ದು, ಜೆಡಿಎಸ್‌ಗೆ ಹೋಗಿದ್ದಾಗ ಮರಳಿ ಬಿಜೆಪಿಗೆ ಕರೆತಂದದ್ದು ಯಡಿಯೂರಪ್ಪನವರು ಎಂಬುದನ್ನು ಮರೆಯಬೇಡಿ. ವಿಜಯಪುರದಲ್ಲಿ ನಿಮ್ಮ ಹೊಂದಾಣಿಕೆ ರಾಜಕಾರಣ ಯಾರೊಂದಿಗೆ ಎಂಬುದು ನಮಗೆ ಗೊತ್ತಿದೆ ಎಂದರು.
    ಜಾರ್ಖಂಡ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಮನೆಯಲ್ಲಿ ಪತ್ತೆಯಾದ 300 ಕೋಟಿ ರೂ.ಗೂ ಅಧಿಕ ಹಣದ ಸಂಬಂಧ, ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ರೇಣುಕಾಚಾರ್ಯ, ಇಂಡಿಯಾ ಕೂಟದಲ್ಲಿ ಒಡಕು ಮೂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇರೋದಿಲ್ಲ ಎಂದೂ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts