ಚಂದ್ರಗುತ್ತಿ: ಸೊರಬದ ಬಂಗಾರಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಂದ್ರಗುತ್ತಿಯ ರೇಣುಕಾಂಬ ವಾಲಿಬಾಲ್ ತಂಡದವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ನಿಖಿಲ್, ಸಮೀರ್, ಗುರುಪ್ರಸಾದ್, ಮಯೂರ್, ಗೌತಮ್, ನದೀಮ್, ಸಿರಿಧರ್, ಕೀರ್ತಿರಾಜ್, ಪರಶುರಾಮ್, ಅಭಿಷೇಕ್, ಮಂಜು ವಾಲಿಬಾಲ್ ತಂಡದಲ್ಲಿದ್ದರು.