More

    ದಕ್ಷಿಣದಲ್ಲಿ ಚಂದ್ರಾಸಿಂಗ್ ಪ್ರಚಾರ

    ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ವಿವಿಧೆಡೆ ಸಂಚರಿಸಿ ಅಬ್ಬರದ ಪ್ರಚಾರ ನಡೆಸಿದರು.
    ಸಿರ್ಸಿ(ಎ), ಖಾಶೆಂಪುರ (ಸಿ), ಭೈರನಳ್ಳಿ, ನಿಡವಂಚಾ, ಮರಕುಂದಾ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ಮಾಡಿ, ಕ್ರಮ ಸಂಖ್ಯೆ 9ರ ವಿದ್ಯುತ್ ಕಂಬ ಗುರುತಿಗೆ ಮತ ನೀಡುವಂತೆ ಕೋರಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ 12 ವರ್ಷಗಳಿಂದ ಕ್ಷೇತ್ರದ ಜನರ ಸೇವೆಯಲ್ಲಿ ಇದ್ದೇನೆ. ಅಭಿವೃದ್ಧಿ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕ್ಷೇತ್ರ ಜನರು ನನ್ನ ಕೈಹಿಡಿಯಬೇಕು ಎಂದು ಚಂದ್ರಾಸಿಂಗ್ ಮನವಿ ಮಾಡಿದರು.
    ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಚಂದ್ರಾಸಿಂಗ್ ಅವರಿಗೆ ಬರಮಾಡಿಕೊಂಡರು. ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ನೀಡುತ್ತೇನೆ ಎಂದು ಹೇಳಿ ಮೋಸ ಮಾಡಿದೆ. ಆದ್ದರಿಂದ ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಗೆಲುವು ಖಚಿತ ಎಂದು ಮತದಾರರು ಅಭಯ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts