More

    ವಕೀಲರ ಸಂಘಕ್ಕೆ ಚುನಾವಣೆ

    ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘಕ್ಕೆ ವಕೀಲರ ಭವನದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಚುನಾವಣೆಯಲ್ಲಿ ಶೇ 90ರಷ್ಟು ಮತದಾನವಾಗಿದ್ದು, ಫಲಿತಾಂಶ ರಾತ್ರಿ ಪ್ರಕಟವಾಯಿತು. ನೂತನ ಅಧ್ಯಕ್ಷರಾಗಿ ವೈ.ಟಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಜಿ.ಎಂ.ಅನಿಲ್‌ಕುಮಾರ್ ಆಯ್ಕೆಯಾದರು.
    ಶ್ರೀ ಬಸವನಾಗಿದೇವ ಸ್ವಾಮೀಜಿ,ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಸೇರಿ ಅನೇಕ ಗಣ್ಯರು ಮತ ಚಲಾಯಿಸಿದರು. 863 ಮತಗಳ ಪೈಕಿ 765 ಚಲಾವಣೆಯಾಯಿತು.
    ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೈ.ಟಿ.ತಿಪ್ಪೇಸ್ವಾಮಿ 304 ಮತ ಪಡೆದು ವಿಜಯದ ನಗೆ ಬೀರಿದರು. ಕಣದಲ್ಲಿದ್ದ ಕೆ.ಮಂಜುನಾಥರೆಡ್ಡಿ-262, ಎಚ್.ಎಸ್.ಮಹೇಶ್ವರಪ್ಪ-174, ಟಿ.ಚಂದ್ರಣ್ಣ-13, ಟಿ.ಬೊಮ್ಮಯ್ಯ 18 ಮತ ಪಡೆದರು.
    ಉಪಾಧ್ಯಕ್ಷ ಸ್ಥಾನಕ್ಕೆ ಕಣದಲ್ಲಿದ್ದ ಜಿ.ಎಂ.ಅನಿಲ್‌ಕುಮಾರ್ 399 ಮತಗಳೊಂದಿಗೆ ಜಯಗಳಿಸಿದರು. ಎಂ.ಕೆ.ಲೋಕೇಶ್-228, ಕಿರಣ್‌ಜೈನ್-29, ಎಂ.ತಿಪ್ಪೇಸ್ವಾಮಿ-109, ಎಂ.ಸಿ.ನರಹರಿ 6 ಮತ ಪಡೆದರು.
    ಆರ್.ಗಂಗಾಧರ್ 388 ಮತಗಳಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಬಿ.ಇ.ಪ್ರದೀಪ್-535 ಖಜಾಂಚಿ, ಗಿರೀಶ್ ಬಿ.ಮಲ್ಲಾಪುರ-354 ಮತ ಪಡೆದು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಚುನಾವಣೆಗೂ ಮುನ್ನ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts