More

    ತಾನಾಜಿಯ ವಾನರ ಪ್ರೀತಿ

    ಗೋಕಾಕ: ಲಾಕ್‌ಡೌನ್‌ನಿಂದಾಗಿ ಸಾಮಾನ್ಯ ಜನ ಮಾತ್ರವಲ್ಲದೆ ಮೂಕಪ್ರಾಣಿಗಳೂ ನಿತ್ಯ ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಪರಿತಪಿಸುತ್ತಿವೆ. ಇದನ್ನು ಅರಿತ ಸ್ಥಳೀಯ ನಿವಾಸಿ, ವ್ಯಾಪಾರಿಯಾಗಿರುವ ತಾನಾಜಿ ಭೂಸಾರಿ ಅವರು ಸಮೀಪದ ಮಲ್ಲಿಕಾರ್ಜುನ ಬೆಟ್ಟಕ್ಕೆ ಪ್ರತಿ ಮಂಗಳವಾರ ಹಾಗೂ ಶನಿವಾರ ತೆರಳಿ ಕಪಿಗಳಿಗೆ ಬಿಸ್ಕತ್ತು, ಬ್ರೇಡ್ ಸೇರಿ ಮತ್ತಿತರ ಆಹಾರ ಪದಾರ್ಥ ನೀಡುವ ಮೂಲಕ ಕಪಿಗಳ ಪಾಲಿನ ಕಾಮಧೇನುವಾಗಿದ್ದಾರೆ.

    ವರ್ಷಗಳಿಂದ ಸೇವೆ: ಭೂಸಾರಿ ಅವರು 4-5ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. ಲಾಕ್‌ಡೌನ್‌ನಿಂದ ತಮ್ಮ ವ್ಯಾಪಾರ ಬಂದ್ ಆದರೂ ಅವರು ಕಪಿಗಳಿಗೆ ಆಹಾರ ವಿತರಿಸುವ ಕಾಯಕವನ್ನು ಮುಂದುವರಿಸಿದ್ದಾರೆ. ತಾನಾಜಿ ಅವರ ಈ ಸೇವೆಗೂ ಪೊಲೀಸರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬದುಕು ಉಳಿಸಿದ ಸೇವೆ: ನಾನು ಕಳೆದ ವರ್ಷ ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದೆ, ಅಲ್ಲದೆ, ಮಂಗಗಳಿಗೆ ಆಹಾರ ನೀಡಿದ್ದ ಪುಣ್ಯ ನನ್ನನ್ನು ಕಾಪಾಡಿದೆ. ಸದ್ಯ ನಾನು ಸಮಸ್ಯೆಯಿಂದ ಮುಕ್ತವಾಗಿರುವೆ ಎಂದು ಮನದಾಳ ಹಂಚಿಕೊಳ್ಳುತ್ತಾರೆ ಭೂಸಾರಿ.

    | ದಿಲೀಪ ಮಜಲೀಕರ ಗೋಕಾಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts