ಚೆನ್ನೈ: ತಮಿಳುನಾಡಿನ ಮೊದಲ ಬಿಜೆಪಿ ಶಾಸಕ ಸಿ.ವೇಲಾಯುಧನ್ ಬುಧವಾರ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಕನ್ಯಾಕುಮಾರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ!
Anguished by the passing away of Thiru C. Velayutham Ji, the first BJP MLA from Tamil Nadu. It is people like him who have built our Party in Tamil Nadu and explained our development agenda to the people. He will also be remembered for his concern for the poor and downtrodden.…
— Narendra Modi (@narendramodi) May 8, 2024
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ, ಮುರುಗನ್, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಧ್ಯಕ್ಷ ಅಣ್ಣಾಮಲ್ಲೈ ಅವರು ಸೇರಿದಂತೆ ಇನ್ನಿತರು ಸಂತಾಪ ಸೂಚಿಸಿದ್ದಾರೆ.
முன்னாள் தமிழ்நாடு சட்டமன்ற உறுப்பினரும், சமூக சேவகருமான திரு.C.வேலாயுதம் அவர்கள் இறைவனடி சேர்ந்தார் என்ற செய்தி அறிந்து ஆழ்ந்த வருத்தம் அடைந்தேன்.
தமிழக பாரதிய ஜனதா கட்சி வரலாற்றில் முதல் சட்டமன்ற உறுப்பினர் என்ற மாபெரும் பெருமையை பத்மனாபபுரம் தொகுதியிலிருந்து 1996 ல்…
— Jagat Prakash Nadda (Modi Ka Parivar) (@JPNadda) May 8, 2024
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಮಾಜಿ ಶಾಸಕ ಮತ್ತು ಸಮಾಜ ಸೇವಕ ಸಿ ವೇಲಾಯುಧನ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಬಿಜೆಪಿಯಿಂದ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದ ಮೊದಲ ವಿಧಾನಸಭಾ ಅಭ್ಯರ್ಥಿಯಾಗಿದ್ದಾರೆ. 1996 ರ ಚುನಾವಣೆಯಲ್ಲಿ ಪದ್ಮನಾಭಪುರಂ ಕ್ಷೇತ್ರವು ಪಕ್ಷಕ್ಕೆ ಮತ್ತು ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಪೋಸ್ಟ್ ಮಾಡಿದ್ದಾರೆ.
தமிழக பாஜகவின் முதல் சட்டமன்ற உறுப்பினரும், கட்சியின் முன்னோடிகளில் ஒருவருமான, ஐயா திரு.C.வேலாயுதன் அவர்கள் காலமானார் என்ற செய்தி மிகுந்த வருத்தமளிக்கிறது.
கட்சியின் வளர்ச்சிக்கு அரும்பாடு பட்டவர். கொள்கைப் பிடிப்பு மிக்கவர். கடினமான உழைப்பாளி. தமிழகத்தில் பாஜகவின்… pic.twitter.com/xcAgXYoQBa
— K.Annamalai (மோடியின் குடும்பம்) (@annamalai_k) May 8, 2024
1996ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕನ್ಯಾಕುಮಾರಿ ಜಿಲ್ಲೆಯ ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರದಿಂದ ವೇಲಾಯುಧನ್ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಡಿಎಂಕೆ ಪಕ್ಷದ ಬಾಲ ಜನಾತಿಪತಿ ವಿರುದ್ಧ 4.540 ಮತಗಳಿಂದ ಸೋಲಿಸಿದ್ದರು. ಬಿಜೆಪಿಯ ಮೊದಲ ಶಾಸಕರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದರು.
ಬಣ್ಣದ ಹೆಸರಲ್ಲಿ ಭಾರತೀಯರ ನಿಂದನೆ: ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಅಣ್ಣಾಮಲೈ ತಿರುಗೇಟು