More

    ಡಿ.10ರಂದು ನಿಜಲಿಂಗಪ್ಪ ಜನ್ಮ ದಿನಾಚರಣೆ

    ಚಿತ್ರದುರ್ಗ:ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರ ನಾಯಕ ಎಸ್.ನಿಜಲಿಂಗ ಪ್ಪ ಅವರ 121ನೇ ಜನ್ಮ ದಿನಾಚರಣೆ ಮತ್ತು ಜಿಲ್ಲೆ ನೂತನ ಶಾಸಕರ ಅಭಿನಂದನಾ ಸಮಾರಂಭವನ್ನು ಸೀಬಾರದ ಎಸ್‌ಎನ್ ಸ್ಮಾರಕ ‘ಪುಣ್ಯಭೂ ಮಿ’ಯಲ್ಲಿ ಡಿ.10ರಂದು 11ಗಂಟೆಗೆ ಏರ್ಪಡಿಸಲಾಗಿದೆ.
    ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ‌್ಯಕ್ರಮ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಪ್ರೊ. ಎಸ್.ಎನ್.ಕಿರಣ್ ಶಂಕರ್ ಉಪಸ್ಥಿತಿರುವರು. ಶಾಸಕರಾದ ಕೆ. ಸಿ.ವಿರೇಂದ್ರಪಪ್ಪಿ, ಬಿ.ಜಿ.ಗೋವಿಂದಪ್ಪ, ಎನ್.ವೈ ಗೋಪಾಲಕೃಷ್ಣ, ಎಂ.ಚಂದ್ರ ಪ್ಪ, ಟಿ.ರಘುಮೂರ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರನ್ನು ಅಭಿನಂದಿಸಲಾಗುವುದೆಂದು ಟ್ರಸ್ಟ್ ಗೌರವ ಕಾರ್ಯ ದರ್ಶಿ ಎಚ್.ಹನುಮಂತಪ್ಪ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts