More

    ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 23 ಮಂದಿ ಆಯ್ಕೆ 

    ದಾವಣಗೆರೆ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 23 ಶಿಕ್ಷಕರು ಆಯ್ಕೆಯಾಗಿದ್ದಾರೆ.
    ವಿಜೇತರಿಗೆ ಸೆ.5ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ವೇಳೆ ಪ್ರಶಸ್ತಿ ವಿತರಿಸಲಾಗುವುದು ಎಂದು ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ತಿಳಿಸಿದ್ದಾರೆ.
    ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಫಯಿಜ್ ಉರ್ ರೆಹಮಾನ್ (ಚನ್ನಗಿರಿ ತಾ. ಕೆರೆಬಿಳಚಿ), ಅಶ್ವತಕುಮಾರ್ ( ದಾವಣಗೆರೆ ತಾ.ನೀಲಾನಹಳ್ಳಿ), ಸಿ.ಎಂ.ನೇಮಾವತಿ (ಕುಕ್ಕುವಾಡ), ಕೆ.ಎನ್. ಸಾವಿತ್ರಮ್ಮ (ಹರಿಹರ ತಾ. ಕೊಂಡಜ್ಜಿ), ಎಂ. ಶಶಿಕಲಾ (ಜಗಳೂರು ತಾ. ವ್ಯಾಸಗೊಂಡನಹಳ್ಳಿ), ಜಿ.ಎಚ್.ಪ್ರಹ್ಲಾದ್ (ಹೊನ್ನಾಳಿ ತಾ. ಹೊಟ್ಯಾಪುರ), ಎಸ್.ಸರ್ವಮಂಗಳಾ (ನ್ಯಾಮತಿ ತಾ. ಮಲ್ಲಿಗೇನಹಳ್ಳಿ).
    ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಎ.ತನುಜಾ (ಚನ್ನಗಿರಿ ತಾ. ಮೆದಿಕೆರೆ), ಪ್ರಕಾಶ ಮಡಿವಾಳ (ದಾವಣಗೆರೆ ತಾ. ಮಲ್ಲಾಪುರ), ಟಿ. ಪದ್ಮಾ (ಮಾಯಕೊಂಡ), ಕೆ. ಮಂಗಳಾ (ಹರಿಹರ ತಾ. ಧೂಳೆಹೊಳೆ), ಬಿ.ಎನ್.ಬಸವರಾಜ (ಜಗಳೂರು ತಾ.ಹಾಲೇಕಲ್ಲು), ಇಮ್ತಿಯಾಜ್ ಅಹಮದ್ ಖತೀಬ್ (ಹೊನ್ನಾಳಿ ತಾ. ಮಾವಿನಕೋಟೆ), ಜಿ.ಎಚ್.ಜಯಲಕ್ಷ್ಮೀ (ನ್ಯಾಮತಿ ತಾ.ಚಿನ್ನಿಕಟ್ಟೆ), ಡಿ. ಮಹಾಂತೇಶ (ಚನ್ನಗಿರಿ ತಾಲೂಕು ಬಸವಾಪಟ್ಟಣ).
    ಪ್ರೌಢಶಾಲಾ ವಿಭಾಗ: ಎಂ.ಕೆ.ಪುಂಡಲೀಕ (ಚನ್ನಗಿರಿ ತಾ. ಬೆಳಲಗೆರೆ), ವಾಗೀಶ ಮುಲ್ಕಿ ಒಡೆಯರ್ (ಆವರಗೊಳ್ಳ), ಎಂ.ವಿ.ಶಕುಂತಲಾ (ದಾವಣಗೆರೆ ತಾ. ಕುರ್ಕಿ), ಸುರೇಶ್ ಎಸ್.ಮೂಲಿಮನಿ (ಮಲೇಬೆನ್ನೂರು), ಎಂ.ವಿ.ಮಂಜುನಾಥ (ಜಗಳೂರು ತಾ. ಯರಲಕಟ್ಟೆ), ಆರ್.ಎಂ. ಅರುಣಕುಮಾರ್ (ಹೊನ್ನಾಳಿ ತಾ. ಎಚ್.ಗೋಪಗೊಂಡನಹಳ್ಳಿ), ಡಿ.ಎಸ್.ಮಂಜುನಾಥ (ನ್ಯಾಮತಿ ತಾ. ಜೀನಹಳ್ಳಿ). ಬಿ. ಸುಜಾತಾ (ದಾವಣಗೆರೆ ತಾ. ಹೊನ್ನೂರು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts