More

    ಜನರ ಸಮಸ್ಯೆ ಆಲಿಸಿದ ಶಾಸಕ ಅಶೋಕ್ ನಾಯ್ಕ್

    ಆಯನೂರು: ಕುಂಸಿ ಜಿಪಂ ವ್ಯಾಪ್ತಿಯಲ್ಲಿ ಗುರುವಾರ ಪ್ರವಾಸ ಕೈಗೊಂಡ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರು ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಸಿರಿಗೆರೆ, ಆಯನೂರು, ಕೋಹಳ್ಳಿ, ತಮ್ಮಡಿಹಳ್ಳಿ, ಕಾಚಿಕೊಪ್ಪ, ಬಿಲ್ಗುಣಿ, ಮಂಡಘಟ್ಟ, ಸೂಡೂರು, ಚಿನ್ನಮನೆ, ದ್ಯಾವಿನಕೆರೆ, ರೇಚಿಕೊಪ್ಪ ಗ್ರಾಮಗಳಲ್ಲಿ ಸುತ್ತಾಟ ನಡೆಸಿದರು. ಜನರು ಅನೇಕ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಹೊಸೂರು ಗ್ರಾಮಕ್ಕೆ ರುದ್ರಭೂಮಿ ಇಲ್ಲ. ಗ್ರಾಮದ ಜನರು ಸತ್ತರೆ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ. ನಮಗೆ ರುದ್ರಭೂವಿ ಮಂಜೂರು ಮಾಡಿಸಿಕೊಡಿ ಎಂದು ಒತ್ತಾಯಿಸಿದರು. ತಕ್ಷಣ ಸ್ಪಂದಿಸಿದ ಶಾಸಕರು ದೂರವಾಣಿ ಮೂಲಕ ಸಂಬಂಧಪಟ್ಟ ಅ„ಕಾರಿಗಳೊಂದಿಗೆ ಮಾತನಾಡಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿ¯್ಲÁ ಉಪಾಧ್ಯಕ್ಷೆ ಪದ್ಮಿನಿ, ಜಿಪಂ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಲಕ್ಷ್ಮೀಕಾಂತ ಶೆಟ್ಟಿ, ಬೂತ್ ಅಧ್ಯಕ್ಷ ನರಸಿಂಹ, ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಪಾಂಡುರಂಗ, ಶರತ್, ಷಣ್ಮುಖ, ಅವಿನಾಶ್, ರಾಮು, ಸಂತೋಷ್, ಆರ್ಮುಗ, ರಾಜೇಂದ್ರ, ಗಣೇಶ, ಮಂಜುನಾಥ, ಲಕ್ಷ್ಮಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts