ಚಿತ್ರದುರ್ಗ: ನಗರದಲ್ಲಿ ಎರಡು ದಿನ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿವೈಎಸ್ಪಿ ಅನಿಲ್ಕುಮಾರ್, ಪಿಎಸ್ಐ ಸಚಿನ್ ಪಾಟೀಲ್, ಕಾಂತರಾಜ್ ನೇತೃತ್ವದ ಚಿತ್ರದುರ್ಗ ಉಪವಿಭಾಗ ತಂಡ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ಕುಮಾರ್ ಮೀನಾ ಅವರು ಪ್ರಶಸ್ತಿ ವಿತರಿಸಿದರು. ಡಿಎಆರ್ನ ಡಿವೈಎಸ್ಪಿ ಗಣೇಶ್ ಇತರರಿದ್ದರು.