More

    ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿ – ಪ್ರಮೋದ ಮುತಾಲಿಕ

    ಚಿಕ್ಕೋಡಿ: ರಾಜ್ಯ ಸರ್ಕಾರ ಕೇವಲ ಗೋಹತ್ಯೆ ನಿಷೇಧ ಕಾಯ್ದೆ ತಂದರೆ ಸಾಲದು. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಗೋವು ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

    ತಾಲೂಕಿನ ಕರೋಶಿ ಗ್ರಾಮದಲ್ಲಿ ಈಚೆಗೆ ಶ್ರೀಕೃಷ್ಣ ಗೋಶಾಲೆ ಉದ್ಘಾಟಿಸಿ ಮಾತನಾಡಿ, ರಾಜಾರೋಷವಾಗಿ ಗೋಹತ್ಯೆ ನಡೆಯುತ್ತಿದ್ದು, ಸರ್ಕಾರ ಮತ್ತು ಪೊಲೀಸರು ತಡೆಯಬೇಕು ಎಂದರು. ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರತುಪಡಿಸಿದರೆ ನಾವೆಲ್ಲರೂ ಹಿಂದುಗಳಾಗಿದ್ದೇವೆ ಎಂಬುದನ್ನು ಮರೆಯಬಾರದು.

    ಜಾತಿಗೊಂದು ಸಂಟನೆಗಳಿದ್ದರೂ, ಅಂತರಾತ್ಮದಲ್ಲಿ ನಾವು ಹಿಂದುಗಳು ಎನ್ನುವ ಭಾವ ಯುವಕರಲ್ಲಿ ಬರಬೇಕು ಎಂದರು. ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕು. ಧರ್ಮ ರಕ್ಷಣೆಯಾಗಬೇಕಾದರೆ ಗೋವಿನ ಸಂತತಿ ಉಳಿಯಬೇಕು. ದೇಶ ಮತ್ತು ಗೋವುಗಳನ್ನು ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ದುಂಡಪ್ಪ ಬೆಂಡವಾಡೆ, ವಿಜಯಕುಮಾರ ಕೋಠಿವಾಲೆ, ಬಸವರಾಜ ಕಲ್ಯಾಣಿ, ಶಿವಾನಂದ ಬಂತೆ, ಅನಿತಾ ಬನಗೆ, ಸಾವಿತ್ರಿ ಜೇದೆ, ವಿನಾಯಕ ಮುಂಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts