ಧಾರವಾಡ: ಭಾರತೀಯ ಆಹಾರ ನಿಗಮದಿಂದ ಗೋಧಿದಿಯನ್ನು ಸಗಟು ವ್ಯಾಪಾರಿಗಳು, ಆಹಾರಧಾನ್ಯ ವರ್ತಕರು, ಕಿರಾಣಿ ವ್ಯಾಪಾರಸ್ಥರಿಗೆ ಮತ್ತು ಎಪಿಎಂಸಿ ವರ್ತಕರಿಗೆ ಒಎಂಎಸ್ಡಿ ಅಡಿ ಇ ಹರಾಜಿನಲ್ಲಿ ಭಾಗವಹಿಸದೆ ನೇರವಾಗಿ ಜಿಲ್ಲಾಧಿಕಾರಿ ಪರವಾನಗಿ ಪಡೆದು ಖರೀದಿಸಲು ಅವಕಾಶ ನೀಡಲಾಗಿದೆ.
ಕನಿಷ್ಠ 10 ಮೆಟ್ರಿಕ್ ಟನ್ನಿಂದ ಗರಿಷ್ಠ 5,000 ಮೆಟ್ರಿಕ್ ಟನ್ವರೆಗೆ ಪ್ರತಿ ವಾರಕ್ಕೆ ಖರೀದಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು, ಕಿರಾಣಿ ವರ್ತಕರು, ಆಹಾರಧಾನ್ಯ ಸಗಟು ವರ್ತಕರು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
ಆಸಕ್ತ ವ್ಯಾಪಾರಿಗಳು ಹಾಗೂ ಸಗಟು ವ್ಯಾಪಾರಿಗಳು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ಎಫ್ಸಿಐದಿಂದ ನೇರವಾಗಿ ಗೋದಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</