More

    ಗುಡಿಸಲುವಾಸಿಗಳಿಗೆ ಅಕ್ಕಿ, ತರಕಾರಿ ವಿತರಣೆ

    ರೋಣ: ಪಟ್ಟಣದ ಯುವಕರು ಮಂಗಳವಾರ ಪಟ್ಟಣದ ವಿವಿಧೆಡೆ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ಅಕ್ಕಿ ಮತ್ತು ತರಕಾರಿಗಳನ್ನು ವಿತರಿಸಿದರು. ಜನತಾ ಪ್ಲಾಟ್, ಕಲ್ಯಾಣ ನಗರ, ಪ್ರವಾಸಿ ಮಂದಿರ ಹಿಂದುಗಡೆ ಸೇರಿ ಇನ್ನಿತರ ಬಡಾವಣೆಗಳಲ್ಲಿನ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಿದರು. ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ, 5 ಕೆಜಿ ತರಕಾರಿಗಳನ್ನು ವಿತರಿಸಿದರು.

    ಕಳೆದ ಒಂದು ವಾರದಿಂದ ಪಟ್ಟಣದ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ ಮನೆಯಲ್ಲಿಯೇ ಕುಳಿತಿದ್ದು, ಅಂತಹ ವೈದ್ಯರು ದಯವಿಟ್ಟು ಈ ಸಮಯದಲ್ಲಿ ಬಡವರ ಸೇವೆಗೆ ಮುಂದಾಗಬೇಕು ಎಂದು ಯುವಕರು ಮನವಿ ಮಾಡಿದ್ದಾರೆ.

    ದಾನಿಗಳಿಂದ ಕೈಲಾದ ಸೇವೆ: ನಿತ್ಯ ದುಡಿದು ತಿನ್ನುವ ಗುಡಿಸಲುವಾಸಿಗಳ ದುಸ್ಥಿತಿ ಕುರಿತು ಮಾ. 29ರಂದು ಸಮಗ್ರ ವರದಿ ಪ್ರಕಟಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಪಟ್ಟಣದ ಗುಡಿಸಲು ವಾಸಿಗಳಿಗೆ ದಾನಿಗಳು ನಿರಂತರವಾಗಿ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts