More

    ಗಡಿಭಾಗದಲ್ಲಿ ಗಾಂಜಾ ಅಕ್ರಮ ಸಾಗಾಟ, ಅಬಕಾರಿ ಅಧಿಕಾರಿಗಳ ದಾಳಿ, ಜಫ್ತು ಮಾಡಿದ ಗಾಂಜಾ ಎಷ್ಟು ಗೊತ್ತಾ?

    ವಿಜಯಪುರ: ಕರ್ನಾಟಕ- ಮಹಾರಾಷ್ಟ್ರದ ಗಡಿಭಾಗದಲ್ಲಿ ಗಾಂಜಾ ಅಕ್ರಮ ಸಾಗಾಟ ಹಾವಳಿ ಹೆಚ್ಚಿದ್ದು, ಗುರುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಬಬಲೇಶ್ವರ ತಾಲೂಕಿನ ಹಲಗಣಿ ಕ್ರಾಸ್ ಬಳಿ ಗುರುವಾರ ಈ ಘಟನೆ ನಡೆದಿದೆ‌ ಕಾತ್ರಾಳ ಗ್ರಾಮದ ಸಂಜೀವ ರಾಮಪ್ಪ ಕಾಂಬಳೆ ಹಾಗೂ ಸಿದರಾಯ ಸಂಗಪ್ಪ ಮನಗೂಳಿ ಬಂಧಿತ ಆರೋಪಿಗಳು. ಇವರಿಂದ ಗಾಂಜಾ ಹಾಗೂ ಬೈಕ್ ಸೇರಿ ಒಟ್ಟು 60 ಸಾವಿರ ರೂ.ಮೌಲ್ಯದ ಸಾಮಗ್ರಿ ಜಫ್ತು ಮಾಡಿಕೊಳ್ಳಲಾಗಿದೆ.

    ಅಬಕಾರಿ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಪಿಎಸ್ ಐ ಪ್ರಕಾಶ ಜಾಧವ, ಪೇದೆಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ, ಪರಶುರಾಮ ತೆಲಗಿ ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts