More

    ಗಂಗಾಂಬಿಕಾ ಸಹಕಾರಿ ಸಂಘ ಹೆಮ್ಮರವಾಗಿ ಬೆಳೆಯಲಿ

    ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ಗ್ರಾಹಕರ ಪ್ರೀತಿ-ವಿಶ್ವಾಸ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಿಸ್ವಾರ್ಥ ಸೇವೆಯೊಂದಿಗೆ 20ವರ್ಷಗಳ ಕಾಲ ಉತ್ತಮ ಸೇವೆ ಮೂಲಕ ಸಾಧನೆ ಮಾಡಿರುವ ಗಂಗಾಂಬಿಕಾ ಸೌಹಾರ್ದ ಸಹಕಾರಿಯು ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಸ್ಥಳೀಯ ಗಂಗಾಂಬಿಕಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ, ವೀರಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಹಕಾರಿ ಅಭಿವೃದ್ಧಿಗೆ ಸಹಕಾರ ನೀಡಿದ ಸದಸ್ಯರ ಮತ್ತು ಸಹಕಾರಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಆಡಳಿತ ಮಂಡಳಿಗೆ ಮಾರ್ಗದರ್ಶಕರಾಗಿದ್ದ ಸಹಕಾರಿ ಸಂಸ್ಥಾಪಕ ಅಧ್ಯಕ್ಷ ದಿ.ಎನ್.ಆರ್.ಪಾಟೀಲ ಅವರ ಕಾರ್ಯ ಸ್ಮರಣೀಯ ಎಂದರು.

    ಬೈಲಹೊಂಗಲದ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್ ಮಾತನಾಡಿ, ಸಹಕಾರಿಯ ಅಭಿವೃದ್ಧಿಗೆ ನೂತನ ಕಟ್ಟಡವೇ ಸಾಕ್ಷಿಯಾಗಿದ್ದು, ಸಹಕಾರಿ ಕಾನೂನುಗಳ ತತ್ವದಡಿಯಲ್ಲಿ ಮುನ್ನಡೆದು, ಸದಸ್ಯರ ಮತ್ತು ಗ್ರಾಹಕರ ವಿಶ್ವಾಸದೊಂದಿಗೆ ಸಹಕಾರಿ ಸಂಘ-ಸಂಸ್ಥೆಗಳು ಮುನ್ನಡೆಯಬೇಕೆಂದು ಸಲಹೆ ನೀಡಿದರು. ಸಹಕಾರಿ ಅಧ್ಯಕ್ಷ ಅಂಬಾದಾಸ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಹಿರಿಯ ಲೆಕ್ಕ ಪರಿಶೋಧಕ ಮರೆಪ್ಪ ಬೋಗಾರ, ಸಹಕಾರಿ ಉಪಾಧ್ಯಕ್ಷ ಬಸವರಾಜ ಇಟಗಿ, ನಿರ್ದೇಶಕರಾದ ಶಿವಾನಂದ ಮುನವಳ್ಳಿ, ಶ್ರೀಕಾಂತ ಯಲಿಗಾರ, ಗಂಗಪ್ಪ ವಾಲಿ, ರಮೇಶ ಚಳ್ಳಮರದ, ಶಿವಾನಂದ ಗಾಣಿಗೇರ, ಗುರುಪುತ್ರ ಹಲಸಗಿ, ಆನಂದ ಶೀಗಿಹಳ್ಳಿ, ಕಲ್ಲಪ್ಪ ಸಣ್ಣಕ್ಕಿ, ಮೀನಾಕ್ಷಿ ಕೆಂಚರಾಹುತ, ಗಿರಿಜಾ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈರಣ್ಣ ಕರವಿನಕೊಪ್ಪ, ವಿಜಯ ರಾಹುತ, ಜೆ.ಎಚ್.ಪೂಜಾರ, ಕೆ.ಜಿ.ಗಡಾದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts