More

    ಕ್ಷೇತ್ರವನ್ನು ಮಾದರಿ ಮಾಡುತ್ತೇನೆ

    ಸರಗೂರು: ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಹಂಚೀಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಕೃಷ್ಣನಾಯಕ ಮಂಗಳವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.


    ಸರಗೂರು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಪ್ರಚಾರಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ. ಹಂಚೀಪುರ, ಮಸಹಳ್ಳಿ, ನರಸೀಪುರ, ಹಳಿಯೂರು, ದಡದಹಳ್ಳಿ, ಹುಲ್ಲೇಮಾಳ, ದೇವಲಾಪುರ, ಕಲ್ಲಹಳ್ಳ, ಬಿ. ಮಟಕೆರೆ ಎಸ್ಸಿ ಕಾಲನಿ, ಬಿ. ಮಟಕೆರೆ, ನೆಮ್ಮನಹಳ್ಳಿ, ಮಠದಕಟ್ಟೆ, ತೆಗಲುಮಸಹಳ್ಳಿ, ಹೆಗ್ಗನೂರು, ಲಿಂಗೇನಹಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮತಯಾಚನೆ ಸಂದರ್ಭ ಗ್ರಾಮಸ್ಥರ ಸಮಸ್ಯೆ ಆಲಿಸಿದರು.


    ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮತ ಕೊಟ್ಟಿದ್ದೀರಿ. ಮುಂದಿನ ಐದು ವರ್ಷ ನಿಮ್ಮ ಕೃಷ್ಣನಾಯಕನಿಗೆ ಮತ ಕೊಟ್ಟು ನೋಡಿ. ಕ್ಷೇತ್ರವನ್ನು ಮಾದರಿ ಮಾಡುತ್ತೇನೆ. ಸಮಯದ ಕೊರತೆ ಇದೆ. ನಿಮ್ಮ ಊರುಗಳಲ್ಲಿ ನೀವೇ ಅಭ್ಯರ್ಥಿಗಳು ಎಂದು ಮನೆ ಮನೆಗೆ ತೆರಳಿ ಬಿಜೆಪಿ ಮತ ಹಾಕುವಂತೆ ಮನವಿ ಮಾಡಿದರು.


    ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಕ್ಕೆ ಶುಭ ಸೂಚನೆಯಂತೆ ಅನೇಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಿಮ್ಮೆಲ್ಲರ ಶಕ್ತಿಯಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಲಕ್ಷ್ಮಣ್, ತಾಲೂಕು ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಸಿ.ಕೆ.ಗಿರೀಶ್, ಮೊತ್ತ ಬಸವರಾಜಪ್ಪ, ಮನುಗನಹಳ್ಳಿ ಮಂಜು, ಸೋಮು ರೈ, ದೊಡ್ಡಯ್ಯ, ಕೆ.ಟಿ. ಹರೀಶ್, ರವೀಶ್, ನಾಗರಾಜು, ಯಜಮಾನ ಶಿವಣ್ಣ, ಅಣ್ಣಯ್ಯಸ್ವಾಮಿ, ಪುಟ್ಟರಾಜು, ಬೂತ್ ಕಮಿಟಿ ಅಧ್ಯಕ್ಷ ಭಾನುಪ್ರಕಾಶ್, ಗೌತಮ್, ಸತೀಶ್, ವಿಜಯಕುಮಾರ್, ಮುತ್ತುರಾಜ್, ನಾಗರಾಜು, ನವೀನ್, ರಮೇಶ್, ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts