More

    ಕೋವಿಡ್ ನಿಯಮ ಮರೆತು ಸುತ್ತಾಡಿದ ಜನ

    ಹುಬ್ಬಳ್ಳಿ: ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಲಾಕ್​ಡೌನ್​ನ ವಿನಾಯಿತಿ ಅವಧಿಯಲ್ಲಿ ನಗರದ ಜನರು ಗುರುವಾರದಂದು ಕೋವಿಡ್ ನಿಯಮಗಳನ್ನು ಮರೆತು ಸುತ್ತಾಡಿದರು.
    ಬೆಳಗ್ಗೆಯಿಂದಲೇ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತು. ಜಿಟಿಜಿಟಿ ಮಳೆ ಮಧ್ಯೆಯೂ ಜನರು ದಿನಸಿ ಹಾಗೂ ಇತರ ವಸ್ತುಗಳ ಖರೀದಿಗೆ ರಸ್ತೆಗೆ ಇಳಿದಿದ್ದರು. ಹೂವು, ಹಣ್ಣು, ತರಕಾರಿ ಖರೀದಿಗೂ ಪರಸ್ಪರ ಅಂತರ ಮರೆತು ಮುಗಿಬಿದ್ದಿದ್ದರು. ಎಂ.ಜಿ. ಮಾರುಕಟ್ಟೆ, ಜನತಾ ಬಜಾರಗಳಲ್ಲಿ ಜನರ ತಿರುಗಾಟ ಹೆಚ್ಚಿಗೆ ಇತ್ತು.
    ಬುಧವಾರದಂತೆ ಮಳೆ ಸತತವಾಗಿ ಸುರಿಯದೇ ಮಧ್ಯೆ ಮಧ್ಯೆ ಬಿಡುವು ಕೊಟ್ಟಿದ್ದರಿಂದ ಮಾರುಕಟ್ಟೆಯಲ್ಲಿ ಜನರು ಕಳೆದ 2 ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
    ಮಧ್ಯಾಹ್ನ 2 ಗಂಟೆಯ ನಂತರ ಜನ ಸಂಚಾರ ಕಡಿಮೆಯಾದರೂ, ವಾಹನಗಳ ಸಂಚಾರ ಕಡಿಮೆಯಾಗಿರಲಿಲ್ಲ. ಚನ್ನಮ್ಮ ವೃತ್ತದಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರು. ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ದಂಡ ವಿಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts